ಕಿನ್ನಾಳ : ಜನಮನ ಸೆಳೆದ ಸಂಗೀತ ಸಂಭ್ರಮ
ಕೊಪ್ಪಳ 14: ತಾಲೂಕಿನ ಕಿನ್ನಾಳ ಗ್ರಾಮದ ಬನಶಂಕರಿ ದೇವಿ ಜಾತ್ರಾ ಮಹೋತ್ಸವ ದ ಅಂಗವಾಗಿ ಅಭಿನವ ಸಂಗೀತ ಕಲಾ ಹಾಗೂ ಸಾಂಸ್ಕೃತಿಕ ಶಿಕ್ಷಣ ಸಂಸ್ಥೆಯು ಹಮ್ಮಿಕೊಂಡಿದ್ದ ಸಂಗೀತ ಸಂಭ್ರಮ ಕಾರ್ಯಕ್ರಮ ಜನಮನ ಸೆಳೆಯಿತು.
ಸಿದ್ದೇಶ್ವರ ಮಹಾಸ್ವಾಮಿಗಳು ಸಂಸ್ಥಾನ ಮಠ ಮೈನಳ್ಳಿ ರವರು ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿಕೊಂಡು ಅರ್ಮೋನಿಯಂ ನುಡಿಸುವುದರ ಮೂಲಕ ಉದ್ಘಾಟನೆ ಮಾಡಿದರು ಗ್ರಾಮದ ಹಿರಿಯರಾದ ಕಾಳಪ್ಪ ಮಾಸ್ತರ ಪತ್ತಾರ್ ರವರು ಕಾರ್ಯಕ್ರಮಕ್ಕೆ ನಾಂದಿ ಹಾಡು ಹಾಡಿ ಚಾಲನೆ ನೀಡಿದರು ದೇವಾಂಗ ಮಠದ ಶಂಕರಾನಂದ ಸ್ವಾಮಿಗಳು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ವೇತಾ ರಾಘವೇಂದ್ರ ಡಂಬಳ್ ರವರು ಅಧ್ಯಕ್ಷತೆ ವಹಿಸಿಕೊಂಡಿದ್ದರು.
ಸಂದರ್ಭದಲ್ಲಿ ಅನಿಲ್ ಕುಮಾರ ಬೋರಟ್ಟಿ ಬಸುವರಾಜ್ ಚೀಲವಾಡಗಿ, ವಿರೇಶ್ ತಾವರಗೇರಿ ದೇವಪ್ಪ ಹಳ್ಳಿಕೇರಿ ಹಲವಾರು ಯುವ ಮುಖಂಡರು ಹಿರಿಯರು ಪಾಲ್ಗೊಂಡು ವೇದಿಕೆ ಕಾರ್ಯಕ್ರಮ ಯಶಸ್ವಿ ಗೊಳಿಸಿದರು.
ಸಂಗೀತ ಸಂಭ್ರಮ ಪ್ರಾರಂಭದಲ್ಲಿ ಮಾರುತಿ ಬಿನ್ನಾಳ ರವರಿಂದ ಶಾಸ್ತಿಯ ಸಂಗೀತ ನಾಗರಾಜ್ ಶಾವಿ ರವರ ಬಾನ್ಸುರಿ ವಾದನ ಜನರ ಮನ ಸೆಳೆಯಿತು ಸಂಗು ಹಿರೇಮಠ್ ಪೂರ್ಣಿಮಾ ತಾವರಗೇರಿ ಯವರು ಸುಗಮ ಸಂಗೀತ ಮತ್ತು ಜಾನಪದ ಸಂಗೀತ ಮತ್ತು ಮಂಗಳೂರಿನಿಂದ ಆಗಮಿಸಿದ ವಿಜಯಲಕ್ಸ್ಮಿ ಯವರ ಭರತ ನಾಟ್ಯ ಅತ್ಯಂತ ಯಶಸ್ವಿಯಾದವು ನಂತರ ವಿವಿಧ ಮನೋರಂಜನೆ ಕಾರ್ಯಕ್ರಮ ಗಳು ನಡೆದವು ಎಂದು ಅಭಿನವ ಸಂಗೀತ ಕಲಾ ಹಾಗೂ ಸಂಸ್ಕೃತಿಕ ಶಿಕ್ಷಣ ಸಂಸ್ಥೆ ಅಧ್ಯಕ್ಷ ಭಾಷಾ ಹಿರೇಮನಿ ಕಿನ್ನಾಳ ತಿಳಿಸಿದ್ದಾರೆ.