ಕರಗಾಂವ ಏತ ನೀರಾವರಿ: ಶಾಸಕ ದುರ್ಯೋಧನ ಐಹೊಳೆ ಚಾಲನೆ

ಕರಗಾಂವ ಏತ ನೀರಾವರಿ: ಶಾಸಕ ದುರ್ಯೋಧನ ಐಹೊಳೆ ಚಾಲನೆ  Karagaon lift irrigation project: MLA Duryodhan Aihole launches

ಮಾಂಜರಿ 04: ಚಿಕ್ಕೋಡಿ ತಾಲೂಕಿನ ಕಲ್ಲೋಳ ಗ್ರಾಮದ ಕೃಷ್ಣ ನದಿ ದಂಡೆಯಲ್ಲಿ, ರಾಯಬಾಗ ವಿಧಾನಸಭಾ ಕ್ಷೇತ್ರದ ಚಿಕ್ಕೋಡಿ ತಾಲೂಕಿನ 14 ಗ್ರಾಮಗಳ ಜಮೀನುಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ಕರಗಾಂವ ಏತ ನೀರಾವರಿ ಯೋಜನೆಯ ಜಾಕ್‌ವೆಲ್ ಭೂಮಿ ಪೂಜೆಯಲ್ಲಿ ಶಾಸಕ ದುರ್ಯೋಧನ ಐಹೊಳೆ ಪಾಲ್ಗೊಂಡು ಚಾಲನೆ ನೀಡಲಾಯಿತು.  

ಇದರ ಮುಂದಿನ ಹಂತದ ಕಾಮಗಾರಿಗಳು ಕೂಡಲೇ ಪ್ರಾರಂಭವಾಗಲಿವೆ. ಚಿಕ್ಕೋಡಿ ಸದಲಗಾ ಶಾಸಕ ಗಣೇಶ್ ಹುಕ್ಕೇರಿ ರಾಯಬಾಗ ಕಾಂಗ್ರೆಸ್ ಮುಖಂಡ ಮಹಾವೀರ ಮೋಹಿತೆ, ಕಲ್ಲೋಳ ಮುಖಂಡ ರವಿ ಮಿರ್ಜೆ, ಶಿವು ಪಾಟೀಲ, ಕರೋಶಿಯ ಮುಖಂಡ ಮಹೇಶ ಭಾತೆ, ಕಬ್ಬೂರಿನ ಮುಖಂಡ ಸುರೇಶ ಬೆಲ್ಲದ, ಕರಗಾಂವ ಮುಖಂಡ ವೃಷಭ ಪಾಟೀಲ, ಕುಂಗಟೋಳಿಯ ಸಂಜುಗೌಡ ಪಾಟೀಲ, ನಾಗರಮುನ್ನೋಳಿಯ ವಿರೂಪಾಕ್ಷ ಈಟಿ, ಸದಾಶಿವ ಘೋರೆ​‍್ಡ, ಅಧಿಕಾರಿಗಳಾದ ಬೆಂಡೆಕಾರ, ಕಮಲಾಕರ, ಮಹಿಮಗೋಳ ಸೇರಿದಂತೆ ಹಲವರು ಉಪಸ್ಥಿತರಿದ್ದರು.