ಕಾಗವಾಡ ಮಂಡಲ ಬಿಎಲ್‌ಎ-2 ಕಾರ್ಯಗಾರ ಸಂಪನ್ನ

ಕಾಗವಾಡ ಮಂಡಲ ಬಿಎಲ್‌ಎ-2 ಕಾರ್ಯಗಾರ ಸಂಪನ್ನ Kagawad Mandal BLA-2 workshop completed


ಕಾಗವಾಡ, 11 : ಮಂಡಲದ ಬಿಎಲ್‌ಎ-2 ಗಳ ಕಾರ್ಯಗಾರವು ತಾಲೂಕಿನ ಕೆಂಪವಾಡದ ಕಾರ್ಖಾನೆಯ ಕೇಂದ್ರ ಕಛೇರಿಯಲ್ಲಿ ಮಾಜಿ ಸಚಿವ ಶ್ರೀಮಂತ ಪಾಟೀಲ ಅವರ ನೇತೃತ್ವದಲ್ಲಿ ಸೋಮವಾರ ದಿ. 10 ರಂದು ಸಂಜೆ ಸಂಪನ್ನಗೊಂಡಿತು. ಕಾರ್ಯಗಾರದಲ್ಲಿ ಬಿಜೆಪಿ ಚಿಕ್ಕೋಡಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಮೃತ ಕುಲಕರ್ಣಿ ಮಾಹಿತಿ ನೀಡಿದರು. ಈ ಸಭೆಯಲ್ಲಿ ಬಿಜೆಪಿ ಚಿಕ್ಕೋಡಿ ಜಿಲ್ಲಾ ಅಧ್ಯಕ್ಷ ಸತೀಶ ಅಪ್ಪಾಜೀಗೋಳ, ಬಿಜೆಪಿ ಕಾಗವಾಡ ಮಂಡಲ ಅಧ್ಯಕ್ಷ ಅರುಣಕುಮಾರ ಗಣೇಶವಾಡಿ, ಮಾಜಿ ಜಿ.ಪಂ. ಸದಸ್ಯ ಅಪ್ಪಾಸಾಬ ಅವತಾಡೆ, ಕಾಗವಾಡ ಮಂಡಲದ ಬಿಎಲ್‌ಎ-1 ಪ್ರಮುಖ ಪ್ರವೀಣ ಕೆಂಪವಾಡೆ, ಮಾಜಿ ಮಂಡಲ ಅಧ್ಯಕ್ಷ ತಮ್ಮಣ್ಣಾ ಪಾರಶೆಟ್ಟಿ ಸೇರಿದಂತೆ ಹಲವಾರು ಮುಖಂಡರು, ಕಾಗವಾಡ ಮಂಡಲದ ಬಿಎಲ್‌ಎ-2 ಗಳು ಉಪಸ್ಥಿತರಿದ್ದರು.