ಕ.ವಿ.ವಿ ಏಕವಲಯ ಮಹಿಳೆಯರ ವಾಲಿಬಾಲ್ ಪಂದ್ಯಾವಳಿ
KVV single zone women's volleyball tournament
ಧಾರವಾಡ 21 : ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ ಮತ್ತು ಜೆ.ಎಸ್.ಎಸ್ ಬನಶಂಕರಿ ಕಲಾ ವಾಣಿಜ್ಯ ಮತ್ತು ಎಸ್.ಕೆ ಗುಬ್ಬಿ ವಿಜ್ಞಾನ ಮಹಾವಿದ್ಯಾಲಯ ವಿದ್ಯಾಗಿರಿ ಧಾರವಾಡ ಇವುಗಳ ಸಂಯುಕ್ತಾಶ್ರಯದಲ್ಲಿ ಕ.ವಿ.ವಿ ಏಕವಲಯ ಮಹಿಳೆಯರ ವಾಲಿಬಾಲ್ ಪಂದ್ಯಾವಳಿ 2025-26 ಜೆ.ಎಸ್.ಎಸ್ ಕದಂಬ ಕ್ರೀಡಾಂಗಣದಲ್ಲಿ ನಡೆಯಿತು. ಪ್ರಸ್ತುತ ಪಂದ್ಯಾವಳಿಯ ಉದ್ಘಾಟನಾ ಸಮಾರಂಭಕ್ಕೆ ಜೆ.ಎಸ್.ಎಸ್ ಶ್ರೀ ಮಂಜುನಾಥೇಶ್ವರ ಸಿಬಿಎಸ್ಸಿ ಶಾಲೆಯ ಪ್ರಾಚಾರ್ಯರಾದ ಶ್ರೀಮತಿ ಸಾಧನ ಎಸ್ ಆಗಮಿಸಿ ಕ್ರೀಡಾಪಟುಗಳಿಗೆ ಸ್ಪೂರ್ತಿಯನ್ನು ತುಂಬಿದರು ಮುಂದುವರೆದು ಇಂದಿನ ಅವಸರದ ಬದುಕಿನಲ್ಲಿ ಕ್ರೀಡೆ ನಮ್ಮ ಬದುಕಿನ ಅವಿಭಾಜ್ಯ ಅಂಗವಾಗಬೇಕು ಸೋಲೇ ಗೆಲುವಿನ ಸೋಪಾನವಾಗಲಿ, ಕ್ರೀಡೆಯಿಂದ ದೈಹಿಕವಾಗಿ ಸದೃಢವಾಗುವುದು ಮಾತ್ರವಲ್ಲ ಮಾನಸಿಕವಾಗಿಯೂ ಬೌದ್ಧಿಕವಾಗಿಯೂ ವ್ಯಕ್ತಿ ಬಲಿಷ್ಠನಾಗುತ್ತಾನೆ. ಸದಾ ಧನಾತ್ಮಕವಾಗಿ ಆಲೋಚನೆಗಳೊಂದಿಗೆ ಜೀವನದಲ್ಲಿ ಎಂತಹ ಅಡೆತಡೆಗಳು ಬಂದರೂ ಎದುರಿಸುವ ಪರಿಪೂರ್ಣ ವ್ಯಕ್ತಿತ್ವ ಕ್ರೀಡೆಯಿಂದ ರೂಪಗೊಳ್ಳುತ್ತದೆ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಜೆ.ಎಸ್.ಎಸ್ ಬನಶಂಕರಿ ಕಲಾ ವಾಣಿಜ್ಯ ಮತ್ತು ಎಸ್ ಕೆ ಗುಬ್ಬಿ ವಿಜ್ಞಾನ ಮಹಾ ವಿದ್ಯಾಲಯದ ಪ್ರಾಚಾರ್ಯರಾದ ಪ್ರೊ. ವೆಂಕಟೇಶ್ ಮುತಾಲಿಕ್ ಅವರು ವಹಿಸಿಕೊಂಡು ಪಠ್ಯದ ಜೊತೆಗೆ ಕ್ರೀಡೆ ವಿದ್ಯಾರ್ಥಿಗಳ ವ್ಯಕ್ತಿತ್ವದ ಸಮಗ್ರ ವಿಕಾಸಕ್ಕೆ ಅವಶ್ಯವಿದೆ ಇಂದು ಪಠ್ಯದಷ್ಟೇ ಮಹತ್ವ ಕ್ರೀಡೆಗೂ ಒದಗಿಸಬೇಕಿದೆ ಎಂದು ಹೇಳಿದರು .ಕಾರ್ಯಕ್ರಮದ ಕೊನೆಯಲ್ಲಿ ಬಹುಮಾನ ವಿತರಣಾ ಸಮಾರಂಭವನ್ನು ನೆರವೇರಿಸಿತು. ಈ ಸಮಾರಂಭದ ಮುಖ್ಯ ಅತಿಥಿಗಳಾಗಿ ಸರ್ಕಾರಿ ಮಾದರಿ ಕನ್ನಡ ಹೆಣ್ಣು ಮಕ್ಕಳ ಶಾಲೆ ಬ್ಯಾಹಟ್ಟಿಯ ನಿವೃತ್ತ ದೈಹಿಕ ಶಿಕ್ಷಕರಾದ ಶ್ರೀ ವೆಂಕನಗೌಡ ಪಾಟೀಲ್ ಇವರು ಆಗಮಿಸಿದ್ದರು, ವಿಜೇತರಿಗೆ ಬಹುಮಾನ ವಿತರಿಸಿ ಸೋಲು-ಗೆೆಲವು ಗೆಲ್ಲಬೇಕೆಂಬ ಸ್ಪರ್ಧಾರ್ಥಿಗೆ ಸಾಮಾನ್ಯವಾದುದು ಮುನ್ನಡೆಯುವವರು ಜಯಿಸುತ್ತಾರೆ.ಸಮಾರಂಭದಲ್ಲಿ ಜೆ.ಎಸ್.ಎಸ್ ಪದವಿ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರು, ಸಂಘಟಕರಾದ ಡಾ. ಜಿನ್ನಪ್ಪ ಕುಂದಗೋಳ, ಉಪಪ್ರಚಾರರಾದ ಅವಂತಿಕಾ ರೊಟ್ಟಿ ಡಾ. ಎನ್.ಡಿ ಕುಲಕರ್ಣಿ ಹಾಗೂ ಡಾ.ಶೌಕತ್ ಅಲಿ, ಕುಮಾರ ವರುಣ್ ಕಾಮರೆಡ್ಡಿ ಅರುಣ ಸವಣೂರ, ಉಪಸ್ಥಿತರಿದ್ದರು. ಶ್ರವಣ ಯೋಗಿ ನಿರೂಪಿಸಿದರು, ಡಾ. ಶಶಿಕಾಂತ ವಂದಿಸಿದರು.
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ 