ಬೆಂಗಳೂರಿನಲ್ಲಿ ನಡೆಯುತ್ತಿರುವ ಜಿಮ್-2025 ಇನ್ವೆಸ್ಟ್ ಕರ್ನಾಟಕ ವಿಶ್ವಬಂಡವಾಳ ಹೂಡಿಕೆದಾರರ ಸಮಾವೇಶ
ವಿಜಯಪುರ 13 : ಬೆಂಗಳೂರಿನ ಅರಮನೆ ಆವರಣದಲ್ಲಿ ನಡೆಯುತ್ತಿರುವ ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶದಲಿ ್ಲಕೈಗಾರಿಕೆ ಸಚಿವರತವರು ಕ್ಷೇತ್ರ ಬಬಲೇಶ್ವರ ಹಾಗೂ ತಿಕೋಟಾ ತಾಲೂಕುಗಳ ಕಾಲೇಜು ವಿದ್ಯಾರ್ಥಿಗಳಿಗೆ ಈ ಸಮಾವೇಶದಲ್ಲಿ ಒಂದು ದಿನದ ಮಟ್ಟಿಗೆ ಭಾಗವಹಿಸಲು ಅವಕಾಶ ಒದಗಿಸುವ ಮೂಲಕ ಗ್ರಾಮೀಣ ಪ್ರದೇಶದಯುವ ಪದವಿ ವಿದ್ಯಾರ್ಥಿಗಳಿಗೆ ವಿಶ್ವದರ್ಜೆಯ ವಿವಿಧ ಉದ್ದಿಮೆಗಳು ಹಾಗೂ ಉದ್ಯಮಿಪತಿಗಳ ಸಂದರ್ಶನಕ್ಕೆಅವಕಾಶವನ್ನು ಸ್ವತಃ ಎಂ.ಬಿ.ಪಾಟೀಲ ಅವರು ಕಲ್ಪಿಸಿದ್ದರು.
ಬೆಂಗಳೂರಿನಲ್ಲಿ ನಡೆಯುತ್ತಿರುವ ಜಿಮ್-2025 ಇನ್ವೆಸ್ಟ್ ಕರ್ನಾಟಕ ವಿಶ್ವಬಂಡವಾಳ ಹೂಡಿಕೆದಾರರ ಸಮಾವೇಶಕ್ಕೆ ಹಿಂದೆಗಿಂತಲೂ ಈ ಬಾರಿ ಹೆಚ್ಚು ಪ್ರಮಾಣದಲ್ಲಿ ವಿಶ್ವದ ಹಲವು ರಾಷ್ಟ್ರಗಳಿಂದ ಹಾಗೂ ದೇಶದಾದ್ಯಂತ ಉದ್ದಿಮೆದಾರರು ಪಾಲ್ಗೊಂಡಿರುವುದು ಸಮಾವೇಶದ ಸಂಭ್ರಮ ಹೆಚ್ಚಿಸಿದೆ. ಸಮಾವೇಶದಎರಡನೇ ದಿನ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲರವರುತಮ್ಮ ಸ್ವಕ್ಷೇತ್ರ ಬಬಲೇಶ್ವರ ಹಾಗೂ ತಿಕೋಟಾ ತಾಲೂಕುಗಳ ವಿವಿಧ ಗ್ರಾಮಗಳ ಲಾ, ನರ್ಸಿಂಗ್, ಬಿ.ಎ, ಬಿ.ಎಸ್.ಸಿ, ಬಿ.ಕಾಂ ಇತ್ಯಾದಿ ಪದವಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಆಯ್ದ 200 ವಿದ್ಯಾರ್ಥಿಗಳು ಹಾಗೂ 15 ಜನ ಪ್ರಾಧ್ಯಾಪಕರಿಗೆ ನಾಲ್ಕು ಕೆ.ಎಸ್.ಆರ್.ಟಿ.ಸಿ ಬಸ್ ಗಳ ವ್ಯವಸ್ಥೆ ಮಾಡಿ, ವಿಜಯಪುರದಿಂದ ಬೆಂಗಳೂರಿಗೆ ಕರೆತಂದು ಬೆಳಿಗ್ಗೆಯಿಂದ ರಾತ್ರಿಯವರೆಗೆಇಡೀ ದಿನ ಸಮಾವೇಶದ ವಿವಿಧ ಘೋಷ್ಠಿಗಳಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳು ಸಂಜೆ ನಡೆದಇನ್ವೆಸ್ಟ್ಕರ್ನಾಟಕ ಬಹುಮಾನ ವಿತರಣೆ ಸಮಾರಂಭದಲ್ಲಿಯೂ ಪಾಲ್ಗೊಂಡಿದ್ದರು.
ಈ ಸಮಾವೇಶದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳಾದ ಮಲ್ಲಿಕಾರ್ಜುನ ಕೋಳಕರ, ಗಣೇಶಗೋಡಸೆ, ನವೀನ ಚಿಟ್ಟಿ, ದಿವ್ಯಾ ಬೂದಿಹಾಳಮಠ, ರೇಣುಕಾ, ತಸ್ಲಿಮ್ ಜಮಾದಾರ, ಮೇಘಾ ಬಿರಾದಾರ ಮಾತನಾಡಿದಅವರು, ಹಳ್ಳಿಯಲ್ಲಿ ಹುಟ್ಟಿ ಬೆಳೆದ ನಾವು ವಿಜಯಪುರವನ್ನು ಮಾತ್ರ ನೋಡಿದ್ದೇವು.ಬೆಂಗಳೂರಿಗೆ ಬಂದುಅಂತಾರಾಷ್ಟ್ರೀಯ ಸಮಾವೇಶದಲ್ಲಿ ಪಾಲ್ಗೊಂಡಿರುವುದು ನಮಗೆ ಹೆಚ್ಚಿನಆತ್ಮಬಲ ನೀಡಿದೆ. ಹೊಸ ಹೊಸ ಅವಕಾಶಗಳಿಗೆ, ಆವಿಷ್ಕಾರಗಳಿಗೆ ಇಲ್ಲಿ ಸಾಕಷ್ಟು ದಾರಿಗಳು ಇವೆ. ಇಂತಹಅದ್ಭುತ ಸಮಾವೇಶದಲ್ಲಿ ಪಾಲ್ಗೊಂಡುಅತೀ ಖುಷಿ ಪಟ್ಟಿದ್ದೇವೆ. ಎಂ.ಬಿ.ಪಾಟೀಲರು ನಮ್ಮವರು ಎಂಬ ಹೆಮ್ಮೆಯಿದೆ. ನೀರಾವರಿ ಮಂತ್ರಿಗಳಾಗಿದ್ದಾಗಲೂ ನಮ್ಮ ಭಾಗಕ್ಕೆಅದ್ಭುತವಾದ ಕೆಲಸ ಮಾಡಿ, ನಮಗೆ ಅನ್ನದಾತರಾಗಿದ್ದಾರೆ.ಇದೀಗ ಇಡೀರಾಜ್ಯಕ್ಕೆ ವಿಶ್ವದ ಬಂಡವಾಳ ಹೂಡಿಕೆಯನ್ನು ಮಾಡಿ, ರಾಜ್ಯದಉದ್ಯೋಗದಾತರಾಗಲಿದ್ದಾರೆಎಂದು ಹೇಳಿದರು.ಸಂಜೆ ಸಮಾವೇಶದಲ್ಲಿ ಬಿ.ಎಲ್.ಡಿ.ಇ ನಿರ್ದೇಶಕ, ಯುವಉದ್ದಿಮೆದಾರ ಬಸನಗೌಡ ಎಂ.ಪಾಟೀಲ ಇನ್ವೆಸ್ಟ್ ಕರ್ನಾಟಕ ಯೋಜನೆ ಮತ್ತು ವಿಜಯಪುರದಲ್ಲಿ ಮುಂದಿನ ದಿನಗಳಲ್ಲಿ ಆರಂಭವಾಗಲಿರುವ ಉದ್ದಿಮೆಗಳ ಮಾಹಿತಿ ನೀಡಿದರು. ಕೈಗಾರಿಕೆ ಸಚಿವರ ಸಾರ್ವಜನಿಕ ಸಂಪರ್ಕಾಧಿಕಾರಿಡಾ.ಮಹಾಂತೇಶ ಬಿರಾದಾರ, ಬಿ.ಎಲ್.ಡಿ.ಇ ಸಂಸ್ಥೆ ಕಾನೂನು ಸಹಾಯಕಸಲಹೆಗಾರ ಸೂರ್ಯಕಾಂತ ಬಿರಾದಾರ, ಪ್ರಾಧ್ಯಾಪಕರಾದಅಮಿತ ಬಿರಾದಾರ, ಭಾಗ್ಯಶ್ರೀ ಬಾಗೇವಾಡಿ, ಕೀರ್ತಿ ಹಳೆಮನಿ, ನವನಾಥಅಜೂರ ಸೇರಿದಂತೆ ಮತ್ತಿತರುಪಾಲ್ಗೊಂಡಿದ್ದರು.