ಅಂತರಾಷ್ಟ್ರೀಯ ಣಮೋಕಾರ ಮಂತ್ರ ದಿವಸ ಆಚರಣೆ
International Namokara Mantra Day Celebration
ಅಂತರಾಷ್ಟ್ರೀಯ ಣಮೋಕಾರ ಮಂತ್ರ ದಿವಸ ಆಚರಣೆ
ಹಾವೇರಿ 09 : ಅಂತರಾಷ್ಟ್ರೀಯ ಣಮೋಕಾರ ಮಂತ್ರ ದಿವಸ ಆಚರಣೆ ಅಂಗವಾಗಿ ವಿಶ್ವಶಾಂತಿಗಾಗಿ ಮಹಾಮಂತ್ರ ಪಠಣೆ ಧ್ಯೇಯವಾಕ್ಯದೊಂದಿಗೆ ಹಾವೇರಿ ನಗರದ ಜೈನ ಮಂದಿರದಲ್ಲಿ ಬುಧವಾರ ಬೆಳಿಗ್ಗೆ 8 ಗಂಟೆಯಿಂದ 9-35ರವರೆಗೆ ಸತತ ಒಂದು ಗಂಟೆ 35 ನಿಮಿಷಗಳ ಕಾಲ ಣಮೋಕಾರ ಮಂತ್ರ ಪಠಣೆ ಮಾಡಲಾಯಿತು.ಈ ಣಮೋಕಾರ ಮಂತ್ರ ಪಠಣದಲ್ಲಿ ಸಮಾಜದ ಮುಂಡರಾದ ಅಧ್ಯಕ್ಷ ಚಂದ್ರನಾಥ ಕಳಸೂರ, ಭರತರಾಜ ಹಜಾರಿ, ಎಸ್.ಎ.ವಜ್ರಕುಮಾರ, ಸನತಕುಮಾರ ಕಳಸೂರ, ಭೂಪಾಲ ಹೋಳಗಿ, ಮಹಾವೀರ ಕಳಸೂರ, ಮಾಣಿಕಚಂದ ಲಾಡರ, ಪಸದ್ಮರಾಜ ಕಳಸೂರ, ವಿಜಯಕುಮಾರ ಸಾತಗೊಂಡ, ಚಿಕ್ಕ ಮಕ್ಕಳು ಸೇರಿದಂತೆ ಸಮಸ್ತ ಶ್ರಾವಕ ಮತ್ತು ಶ್ರಾವಕಿಯರು ಶ್ವೇತ ವರ್ಣದ ಬಟ್ಟೆ ಧರಿಸಿ ಭಾಗವಹಿಸಿದ್ದರು.ಇಂದು ಜಗತ್ತಿನಾದ್ಯಂತ ಏಕಾಲಕ್ಕೆ ಈ ಣಮೋಕಾರ ಮಂತ್ರ ಪಠಣ ಜರುಗಿತು. ವಿಶೇಷವಾಗಿ ದೆಹಲಿಯಲ್ಲಿ ಮಾನ್ಯ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಜಿ ಅವರು ಸಹ ಣಮೋಕಾರ ಮಂತ್ರ ಪಠಣದಲ್ಲಿ ಭಾಗವಹಿಸಿದ್ದರು.
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು 