ಮಹಾಯೋಗಿ ಶಿವಶರಣ ಮಲ್ಲಪ್ಪತಾತ ಚರಿತ್ರೆ ಚಲನ ಚಿತ್ರದ ಚಿತ್ರಿಕರಣ ಉದ್ಘಾಟನೆ

ಮಹಾಯೋಗಿ ಶಿವಶರಣ ಮಲ್ಲಪ್ಪತಾತ ಚರಿತ್ರೆ ಚಲನ ಚಿತ್ರದ ಚಿತ್ರಿಕರಣ ಉದ್ಘಾಟನೆ Inauguration of the shooting of the film Mahayogi Shivasharan Mallappatata Charitra Chalana

             ಕುರಗೋಡು 17: ತಾಲೂಕಿನ ಸಿಂದಿಗೇರಿ ಗ್ರಾಮದಧಾರ್ಮಿಕ ಹಾಗೂ ಸಾಂಸ್ಕೃತಿಕಜೀವನದಲ್ಲಿ ಅಚ್ಚಳಿಯದ ಗುರುತು ಬರೆದಿದ್ದ ಮಹಾಯೋಗಿ ಶಿವಶರಣ ಮಲ್ಲಪ್ಪ ತಾತನವರ ಮಹಿಮೆಯನ್ನುಚಿತ್ರಿಸುವ “ಮಹಾಯೋಗಿ ಶಿವಶರಣ ಮಲ್ಲಪ್ಪತಾತನವರಚರಿತೆ" ಎಂಬ ಚಲನಚಿತ್ರದ ಚಿತ್ರಿಕರಣ ಉದ್ಘಾಟನಾ ಕಾರ್ಯಕ್ರಮವನ್ನು ಧಾತ್ರಿ ರಂಗ ಸಂಸ್ಥೆ ಸಹಯೋಗದಲ್ಲಿ  ನವೆಂಬರ್ 21ಶುಕ್ರವಾರ ರಂದು ಹಮ್ಮಿಕೊಳ್ಳಲಾಗಿದೆ .ಎಂದುಚಿತ್ರದ ಸಹಾಯಕ ನಿರ್ದೇಶಕರಾದ ಚನ್ನಪ್ಪತಾತ. ತಿಳಿಸಿದ್ದಾರೆ. ಮಹಾಯೋಗಿ ಶಿವಶರಣ ಹರಳಯ್ಯ.ತಾತನವರ ನಾಟಕಕಾರ್ಯಕ್ರಮ ವನ್ನು ನವಂಬರ್ 21 ರಂದು ಸಿಂದಿಗೇರಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದು.

          ಚಲನ ಚಿತ್ರ ನಿರ್ದೇಶಕರಾದ ರಾಜೇಶ್ ಚಾ ಗನೂರು. ಹಾಗೂ ಜಗದೀಶ್‌ಆರ್‌ಜಾಣಿ ಇವರ ನೇತೃತ್ವದಲ್ಲಿ ಶಿವಶರಣ ಮಲ್ಲಪ್ಪತಾತನವರ ಚಲನ ಚಿತ್ರ ಉದ್ಘಾಟನೆ ನೇರವೇರಿಯಲಿದೆ.ಈ ಕಾರ್ಯಕ್ರಮದಲ್ಲಿಗ್ರಾಮದ ಹಿರಿಯರು, ಭಕ್ತರು ಹಾಗೂ ಸ್ಥಳೀಯ ಗಣ್ಯರು ಭಾಗವಹಿಸಲಿದ್ದಾರೆ. ಪೂಜಾ ವಿಧಿ, ದೀಪಪ್ರಜ್ವಲನ ಮತ್ತು ಪ್ರಾರ್ಥನೆಯೊಂದಿಗೆ ಕ ಾರ್ಯಕ್ರಮ ಆರಂಭಗೊಂಡು. ನಂತರ ಚಿತ್ರತಂಡದವರು ಚಿತ್ರದ ಉದ್ದೇಶ ಹಾಗೂ ಕಥಾವಸ್ತು ಕುರಿತು ಮಾಹಿತಿ ನೀಡಲಿದ್ದಾರೆಎಂದು ತಿಳಿಸಿದರು.ಸಿಂದಿಗೇರಿ ಗ್ರಾಮಸ್ಥರು ತಾತನವರ ಸೇವಾ ಚರಿತ್ರೆ, ಸಾಮಾಜಿಕ ಬೋಧನೆಗಳು ಹಾಗೂ ಆತ್ಮಶುದ್ದಿ ಮಾರ್ಗದಕುರಿತು ಸಿನಿಮಾ ಜನರಲ್ಲಿ ಜಾಗೃತಿ ಮೂಡಿಸಲಿದೆ ಎಂದು ತಿಳಿಸಿದರು.