ಶುದ್ಧ ಕುಡಿಯುವ ನೀರಿನ ಘಟಕ ಹಾಗೂ ನೂತನ ಸಭಾಂಗಣವನ್ನು ಉದ್ಘಾಟನೆ

ಶುದ್ಧ ಕುಡಿಯುವ ನೀರಿನ ಘಟಕ ಹಾಗೂ ನೂತನ ಸಭಾಂಗಣವನ್ನು ಉದ್ಘಾಟನೆ Inauguration of a clean drinking water unit and a new auditorium

ರಾಯಬಾಗ 02 :  ಸರ್ಕಾರದಿಂದ 1 ಕೋಟಿ ರೂ. ವಿಶೇಷ ಅನುದಾನ ಮಂಜೂರು ಮಾಡಿಸಿ ಪಟ್ಟಣದ ತಹಸೀಲ್ದಾರ ಕಚೇರಿಯನ್ನು ನವೀಕರಣ ಮಾಡಲಾಗಿದೆ ಎಂದು ಶಾಸಕ ಡಿ.ಎಮ್‌.ಐಹೊಳೆ ಹೇಳಿದರು.ಸೋಮವಾರ ಪಟ್ಟಣದ ಮಿನಿ ವಿಧಾನಸೌಧ ಆವರಣ ಗೋಡೆ, ಶುದ್ಧ ಕುಡಿಯುವ ನೀರಿನ ಘಟಕ ಹಾಗೂ ನೂತನ ಸಭಾಂಗಣವನ್ನು ಉದ್ಘಾಟಿಸಿ ಮಾತನಾಡಿದ ಅವರು, ತಮ್ಮ ಕೆಲಸ ಕಾರ್ಯಗಳಿಗೆ  ದಿನ ನಿತ್ಯ ಬರುವ ಸಾವಿರಾರು ಸಂಖ್ಯೆಯ ಸಾರ್ವಜನಿಕರ ಅನುಕೂಲಕ್ಕಾಗಿ ಎಲ್ಲ ಮೂಲಭೂತ ಸೌಕರ್ಯ ಕಲ್ಪಿಸಲಾಗುತ್ತಿದೆ. ಇನ್ನುಳಿದ ಕೆಲಸಗಳನ್ನು ಅತೀ ಶೀಘ್ರದಲ್ಲಿ ಮಾಡಿಸಲು ಸರ್ಕಾರದಿಂದ ಅನುದಾನ ಮಂಜೂರು ಮಾಡಿಸುವುದಾಗಿ ಹೇಳಿದರು. ತಹಸೀಲ್ದಾರ ಮಹಾದೇವ ಸನಮುರಿ, ಗ್ರೇಡ್2 ತಹಸೀಲ್ದಾರ ಪರಮಾನಂದ ಮಂಗಸೂಳಿ, ಅಭಿಯಂತರ ಸಿ.ಎಸ್‌.ಕಾಂಬಳೆ, ಅಣ್ಣಾಸಾಹೇಬ ಖೆಮಲಾಪೂರೆ, ಸದಾನಂದ ಹಳಿಂಗಳಿ, ಕಲಂದರ ಅತ್ತಾರ, ಸಂಗಣ್ಣ ದತ್ತವಾಡೆ, ವಿನಾಯಕ ಭಾಟೆ, ಸಂಜು ಮೈಶಾಳೆ, ರಮೇಶ ಪಾಟೀಲ, ಸೋಮಶೇಖರ ಜೋರೆ, ಆರ್‌.ಎಮ್‌.ಡಬ್ಬನವರ ಹಾಗೂ ತಹಸೀಲ್ದಾರ ಕಾರ್ಯಾಲಯದ ಸಿಬ್ಬಂದಿ ಇದ್ದರು.