ಜಮಖಂಡಿ ರಾಜಾ ಗಣೇಶನ ಮೂರ್ತಿ ವಿಸರ್ಜನೆ
Immersion of the idol of Jamkhandi Raja Ganesha
ಜಮಖಂಡಿ ರಾಜಾ ಗಣೇಶನ ಮೂರ್ತಿ ವಿಸರ್ಜನೆ
ಜಮಖಂಡಿ 05: ನಗರದ ಮಹಾಗಣಪತಿ ಉತ್ಸವ ಸಮಿತಿ ಸಹಯೋಗದಲ್ಲಿ 9ನೇ ದಿನದ ಜಮಖಂಡಿ ರಾಜಾ ಗಣೇಶನ ಮೂರ್ತಿ ವಿಸರ್ಜನೆಯಲ್ಲಿ ಚಾಂಡಿ ವಾದ್ಯದ ಮೂಲಕ ಭವ್ಯ ಮೆರವಣೆಯೊಂದಿಗೆ ವಿಸರ್ಜನೆಯನ್ನು ಮಾಡಲಾಯಿತು.
ಇಲ್ಲಿನ ಐತಿಸಿಕ ಪೋಲೋ ಮೈದನದ ಬಳಿ ಜಮಖಂಡಿ ರಾಜಾ ಗಣೇಶನ ಮೂರ್ತಿ ಪ್ರತಿಷ್ಠಾನ ಮಾಡಲಾಗಿತು. 9ನೇ ದಿನದ ವಿಸರ್ಜನೆಯಲ್ಲಿ ಮಾಜಿ ಶಾಸಕ ಆನಂದ ನ್ಯಾಮಗೌಡ ಅವರು ನೇತೃತ್ವದಲ್ಲಿ ಚಾಂಡಿ ವಾದ್ಯದ ಯುವತಿಯೊಬ್ಬರು ವಾಲಿನ್ ವಾದ್ಯವನ್ನು ನುಡಿಸುವ ಮೂಲಕ ಅವರ ತಂಡದವರು ಹೆಜ್ಜೆಯನ್ನು ಹಾಕುತ್ತಾ ವಾದ್ಯಗಳನ್ನು ಬಾರಿಸುವ ಜೊತೆಗೆ ನೇರದಿದ್ದ ಸಾವಿರಾರ ಜನರ ಗಮನವನ್ನು ಸೆಳೆದರು. ಚಾಂಡಿ ವಾದ್ಯದೊಂದಿಗೆ ಭವ್ಯವಾದ ಮೆರೆವಣಿಗೆ ಪ್ರಾರಂಭಗೊಂಡಿತು.
ಎಜಿ,ದೇಸಾಯಿ ಸರ್ಕಲನಲ್ಲಿ ಲಕ್ಷ್ಮೀ ಇನ್ನವೇಂಟ್ ಹುನ್ನೂರ ಅವರ ಸ್ಟ್ಯಾಂಡಿಗ್ ಡಿಜೆ ಸೌಂಡಗಳನ್ನು ಅಳವಡಿಸಲಾಗಿತು. ಡಿಜೆ ಹಾಡುಗಳಲ್ಲಿ ಮಾಜಿ ಶಾಸಕ ಆನಂದ ನ್ಯಾಮಗೌಡ ಅವರು ಕುಣಿದು ಕುಪ್ಪಳಿಸಿದರು. ಅವರ ಜೊತೆಯಲ್ಲಿ ಬೇರೆ ಜಿಲ್ಲೆಗಳಿಂದ ಆಗಮಿಸಿದ ಚಾಂಡಿ ವಾದ್ಯ ಮೇಳದವರು ಡಿಜೆ ಹಾಡುಗಳಿಗೆ ಕುಣಿದು ಕುಪ್ಪಳಿಸಿದ್ದರು. ನಂತರ ಲಕ್ಷಾಂತ ರೂ,ಗಳ ವಿವಿಧ ಬಗ್ಗೆಯ ಪಟ್ಟಾಕಿ ಮದ್ದುಗಳನ್ನು ಮಾಜಿ ಶಾಸಕ ಆನಂದ ನ್ಯಾಮಗೌಡ ಅವರ ಅಭಿಮಾನಿ ಬಳಗದವರು ಸಿಡಿಸಿ ಸಂಭ್ರಮಿಸಿದರು. ವಿವಿಧ ಬಗ್ಗೆಯ ಪಟ್ಟಾಕಿಯ ಸಿಡಿಮದ್ದುಗಳನ್ನು ಸಿಡಿಸಲು ಬೇರೆ ತಂಡ ಆಗಮಿಸಿತು. ಮಾಹಾ ಗಣಪತಿ ಜಮಖಂಡಿ ರಾಜಾ ಗಣೇಶನ ಮೂರ್ತಿಯ ವಿಸರ್ಜನೆಯಲ್ಲಿ ಮಾಜಿ ಶಾಸಕ ಆನಂದ ನ್ಯಾಮಗೌಡ ಅವರ ಸಹೋದರ ಬಸವರಾಜ ನ್ಯಾಮಗೌಡ ಸೇರಿದಂತೆ ಗಣೇಶನ ನೋಡಲು ಸಾವಿರಾರು ಜನರು ಆಗಮಿಸಿದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 