ಅಡುಗೆ ಸಿಬ್ಬಂದಿಗಳಿಗೆ ಬಿಸಿಊಟದ ತರಬೇತಿ
Hot meal training for kitchen staff
ಯಮಕನಮರಡಿ 12 : ಹುಕ್ಕೇರಿ ತಾಲೂಕಿನಲ್ಲಿ ಅಡುಗೆ ಸಹಾಯಕಿಯರು ವಾರದ ಆರು ದಿನಗಳ ಕಾಲ ಶಾಲಾ ಮಕ್ಕಳಿಗೆ ನಾನಾ ರೀತಿಯ ಪೌಷ್ಠಿಕ ಆಹಾರವನ್ನು ನೀಡುತ್ತಿರುವುದು ಶ್ಲಾಘನೀಯ ಎಂದು ಹುಕ್ಕೇರಿ ಶಿಕ್ಷಣ ಇಲಾಖೆಯ ಅಕ್ಷರ ದಾಸೋಹ ಸಹಾಯಕ ನಿರ್ದೇಶಕಿ ಸವಿತಾ ಹಲಕಿ ಹೆಳಿದರು.
ಸ್ಥಳಿಯ ಬಿ.ಬಿ ಹಂಜಿ ಸಮುದಾಯ ಭವನದಲ್ಲಿ ನಡೆದ ಹತ್ತರಗಿ ಸುತ್ತಮುತ್ತಲಿನ ನಾಲ್ಕು ಕ್ಲಸ್ಟರ ಮಟ್ಟದ ಪ್ರಧಾನ ಮಂತ್ರೀ ಪೋಷಣ ಶಕ್ತಿ ನಿರ್ಮಾಣ(ಮದ್ಯಾಹ್ನ ಉಪಹಾರ ಯೋಜನೆ) ಅಡಿಯಲ್ಲಿ ಅಡುಗೆ ಸಿಬ್ಬಂದಿ ಆಯೋಜಿಸಲಾಗಿದ್ದ ತರಬೇತಿ ಹಾಗೂ ಅಡುಗೆ ಸ್ಪರ್ದೇಯ ಅದ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಬಿಸಿಯೂಟ ಪ್ರತಿ ಮಗುವುಗೂ ತಲುಪುವಂತೆ ನೋಡಿಕೊಳ್ಳುವಲ್ಲಿ ಅಡುಗೆ ಸಹಾಯಕಿಯರ ಪಾತ್ರ ದೊಡ್ಡದು. ಅಡುಗೆ ಮಾಡುವ ಸಂದರ್ಬದಲ್ಲಿ ಯಾವುದೇ ಅನಾಹುತ ಸಂಬವಿಸದಂತೆ ಅವರು ಜಾಣ್ಮೇಯಿಂದ ಕೆಲಸ ಮಾಡುತ್ತಿದ್ದಾರೆ. ಅವರ ಕೆಲಸವನ್ನು ಪ್ರೋತ್ಸಾಹಿಸಲು ವರ್ಷದಲ್ಲಿ ಎರಡು ಬಾರಿ ಇಂತಹ ಕಾರ್ಯಾಗಾರ ಹಾಗೂ ಸ್ಪರ್ದೇಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಸವಿತಾ ಹಲಕಿತಿಳಿಸಿದರು. ಹತ್ತರಗಿ ವಲಯದ ಸುಮಾರು 255 ಸಿಬ್ಬಂದಿ ಈ ತರಬೇತಿಯಲ್ಲಿ ಪಾಲ್ಗೊಂಡಿದ್ದರು.
ಈ ಸಂದರ್ಬದಲ್ಲಿ ಹತ್ತರಗಿ ಅಗ್ನಿ ಶಾಮಕ ಠಾಣಾಧಿಕಾರಿ ವೈ ಜಿ ಕೋಲಕರ ಬಾಗವಹಿಸಿ ಅಡುಗೆ ಮನೆಯಲ್ಲಿ ಪಾಲಿಸಬೇಕಾದ ಮುನ್ನೆಚ್ಚೆರಿಕೆ ಕ್ರಮಗಳನ್ನು ತಿಳಿಸಿದರು. ಇದೇ ಸಂದರ್ಬದಲ್ಲಿ ಅಡುಗೆ ಸಹಾಯಕಿಯರಿಗೆ ರುಚಿಕರ ಅಡುಗೆ ಸ್ಪರ್ದೇ ಏರಿ್ಡಸಲಾಗಿತು. ಕಾರ್ಯಕ್ರಮದಲ್ಲಿ ಶಿಕ್ಷಣ ಇಲಾಖೆಯ ಕ್ಷೇತ್ರ ಸಮನ್ವಯ ಅಧಿಕಾರಿ ಎ ಎಸ್ ಪದ್ಮನ್ನವರ, ಸಿಡಿಪಿಒ ಅಧಿಕಾರಿ ಕಮಲಾ ಹಿರೇಮಠ, ತೋಟಗಾರಿಕೆ ಅಧಿಕಾರಿ ರಾಹುಲ ನಾಶಿಪುಡಿ ಹಾಗೂ ನಾನಾ ಶಾಲೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 