ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನ

 ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನ Honoring achievers who have achieved in various fields

                ಕಂಪ್ಲಿ 25:  ಪಟ್ಟಣದ ಶಾರದ ಶಾಲೆಯ ವಿರೇಶ್ವವ ಸಂಘದ ಆವರಣದಲ್ಲಿ ಕನ್ನಡ ಹಿತರಕ್ಷಕ ಸಂಘದಿಂದ ಸಂಘದ 55ನೇ ವಾರ್ಷಿಕೋತ್ಸವ ಅಂಗವಾಗಿ ಶುಕ್ರವಾರ 28ರಂದು 70ನೇ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಈ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದ ಉದ್ಘಾಟನೆ ಶಾಸಕ ಜೆ.ಎನ್ ಗಣೇಶ ಸಭಾಧ್ಯಕ್ಷತೆ ತಾಲೂಕು ವಿರೇಶ್ವವ ಸಂಘದ ಅಧ್ಯಕ್ಷ ಪಿ.ಮೂಕಯ್ಯಸ್ವಾಮಿ ಉಪನ್ಯಾಸ ಕಾ.ಸ.ಪ ಜಿಲ್ಲಾಧ್ಯಕ್ಷ ಸಿದ್ದರಾಮ ಕಲ್ಮಠ ಅತಿಥಿಗಳಾಗಿ ತಹಶೀಲ್ದಾರ ಜೂಗಲ್ ಮಂಜುನಾಯಕ ಪ್ರಭಾರಿ ಸಿ.ಓ ಬಿ.ಮಲ್ಲಿಕಾರ್ಜುನ ಪಟ್ಟಣದ ಕಲಾವಿದ ಸಂಗೀತಾ ಮತ್ತು ಯೋಗ ಸಾಧಕರಾದ ರಾಮಸಾಗರ ಸಂಗೀತ ಶಿಕ್ಷಕ ಚಿದಾನಂದ ಗವಾಯಿ ಹೋಸಪೇಟೆ ಎ.ಪಿ.ಜಿ ಅಬ್ದುಲ್ ಕಲಾಂ ಶಾಲೆ 7ನೇತರಗತಿ ವಿದ್ಯಾರ್ಥಿ ಯೋಗ ಸಾಧಕಿ ಬಾಲ ಪ್ರತಿಭೆ ಎಸ್ ಪೂಜಾ ಸನ್ಮಾನ .

                    ಮತ್ತು ಪುರಸ್ಕ್ಯತರಾದ ಜಿಲ್ಲಾ ಮಟ್ಟದ ರಾಜೋತ್ಸವ ಪ್ರಶಸ್ತಿ ಬಂಗಿ ದೊಡ್ಡ ಮಂಜುನಾಥ ಬುರ‌್ರಕಥಾ ಕಲಾವಿದರಾದ ಜಂಬಕ್ಕ ಬಯಲಾಟ ಕಲಾವಿದ ಚನ್ನದಾಸರ ಮಾರೆಪ್ಪ .ಸನ್ಮಾನ ಅಭಿನಂದನಾ ಸನ್ಮಾನಿತರಾದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಕಾರ್ಯದರ್ಶಿ ದ್ಯಾಮನ ಗೌಡ ಪಾಟೀಲ್ ಜಿಲ್ಲಾ ಕಾರ್ಯಕಾರಿ ಸಂಘದ ಸಮಿತಿ ಸದಸ್ಯ ಜಿ.ಚಂದ್ರ ಶೇಖರ್ ಗೌಡ ಕ್ರೀಡಾ ಸಾಧನೆ ಮಾಡಿದ ಸನ್ಮಾನಿತರಾದ ಮದರ್ ಥರೇಸಾ .ಪಿ.ಯು.ಕಾಲೇಜು ವಿದ್ಯಾರ್ಥಿನಿಯಾದ ಜಿಲ್ಲಾ ಮಟ್ಟದ ಓಟದಲ್ಲಿ ಜೋತಿ .ಜಾವಲಿನ್ ಥ್ರೋದಲ್ಲಿ ಶಾಷಾಬಿ.  ಫೋಲ್ ವಾಲ್ಟ್‌ನಲ್ಲಿ ಮಲ್ಲೇಶ್ವರಿ ತಾಲೂಕು ಮಟ್ದದಲ್ಲಿ ಕನ್ನಡ ಮಾದ್ಯಮ ಶಾಲೆಯಲ್ಲಿ ಕನ್ನಡ ವಿಷಯದಲ್ಲಿ 125ಕ್ಕೆ 125ಅಂಕ ಪಡೆದ ವಿದ್ಯಾರ್ಥಿಗೆ ಸನ್ಮಾನ ಮತ್ತು ತಾಲೂಕು ಮಟ್ದದಲ್ಲಿ ಅಂಗ್ಲ ಮಾದ್ಯಮದಲ್ಲಿ ಕನ್ನಡ ವಿಷಯಕ್ಕೆ 100ಕ್ಕೆ 100 ಅಂಕಪಡೆದ ವಿದ್ಯಾರ್ಥಿಗಳಿಗೆ ಸನ್ನಾನಿಸಲಾಗುವುದು ಮತ್ತು ಮಕ್ಕಳಿಂದ ಸಾಂಸ್ಕ್ಯತಿಕ ಕಾರ್ಯಕ್ರಮಗಳು ಜರಗಲಿವೆ ಎಂದು ಕನ್ನಡ ಹಿತರಕ್ಷಕ ಸಂಘದ  ಅಧ್ಯಕ್ಷ ಬೂದುಗುಂಪಿ ಅಂಬಣ್ಣ ತಿಳಿಸಿದರು ಸಂಘದ ಗೌರವ ಅಧ್ಯಕ್ಷ ಕ.ಮ.ಹೇಮಯ್ಯಸ್ವಾಮಿ ಕಾರ್ಯದರ್ಶಿ ಸಿ.ಯಂಕಪ್ಪ ಉಪಕಾರ್ಯದರ್ಶಿ ಕ.ಮೆಹಬೂಬ್ ಖಜಾಂಚಿ ಶ್ರೀನಿವಾಸ ಸದಸ್ಯರಾದ ಯಂಕಾರೆಡ್ಡಿ ಸೇರಿ ಅನೇಕರಿದ್ದರು