ನಾಳೆ ರನ್ನ ಬೆಳಗಲಿಯಲ್ಲಿ ಐತಿಹಾಸಿಕ ಕುಂಭಮೇಳ
Historic Kumbh Mela at Ranna Belagali tomorrow
ನಾಳೆ ರನ್ನ ಬೆಳಗಲಿಯಲ್ಲಿ ಐತಿಹಾಸಿಕ ಕುಂಭಮೇಳ
ರನ್ನ ಬೆಳಗಲಿ 16: ಶ್ರೀ ಚಕ್ರ ಪುರವಾಸಿನಿ ಚಕ್ರೇಶ್ವರ ಜ್ಯೋತಿರ್ ವಿಜ್ಞಾನ ಸಂಶೋಧನಾ ಕೇಂದ್ರ ಪುಣ್ಯಕೋಟಿ ಸಿದ್ದಾಶ್ರಮ ರನ್ನ ಬೆಳಗಲಿಯಲ್ಲಿ ನಾಡಹಬ್ಬ ದಸರಾ ಹಾಗೂ ನವರಾತ್ರಿ ಉತ್ಸವ ಪ್ರಯುಕ್ತ ಆದಿಶಕ್ತಿ ಭುವನೇಶ್ವರಿ ಬೆಟ್ಟದ ಭುವನೋತ್ಸವ ಹಾಗೂ ಬೃಹತ್ ಐತಿಹಾಸಿಕ ಕುಂಭಮೇಳವು ಗುರುವಾರ ದಿ. ಸೆಪ್ಟೆಂಬರ್ 18 2025ರಂದು ನಡೆಯಲಿದ್ದು ಮತ್ತು ಮತ್ತು ಆಶ್ರಮದಲ್ಲಿ ನವರಾತ್ರಿ ಹಾಗೂ ದಸರಾ ಹಬ್ಬದ ನಿಮಿತ್ಯವಾಗಿ ಶ್ರೀದೇವಿ ಪುರಾಣ ಹಾಗೂ ಪ್ರವಚನ ಹಮ್ಮಿಕೊಂಡಿದ್ದು, ಶುಭ ಬ್ರಾಹ್ಮೀ ಮುಹೂರ್ತದಲ್ಲಿ ಆದಿಶಕ್ತಿ ಭುವನೇಶ್ವರಿ ಬೆಟ್ಟದ ಭುವನೋತ್ಸವ ಹಾಗೂ ಬೃಹತ್ ಐತಿಹಾಸಿಕ ಕುಂಭಮೇಳ ಹಾಗೂ ಮಹಾ ಚಂಡಿಕಾ ಯಾಗ ಹಮ್ಮಿಕೊಳ್ಳಲಾಗಿದ್ದು ಮತ್ತು ಸಕಲ ವಾದ್ಯ ವೈಭವಗಳೊಂದಿಗೆ ಜಂಬೂ ಸವಾರಿ ಹಾಗೂ ಕುದುರೆ ಕುಣಿತ ವೀರಗಾಸೆ, ನೃತ್ಯದೊಂದಿಗೆ 5008 ಕುಂಭಮೇಳ ಉತ್ಸವ ಸಕಲ ಮುತ್ತೈದೆಯರ ಸಮ್ಮುಖದಲ್ಲಿ ಶ್ರೀದೇವಿಯ ಮೂರ್ತಿ ಮೆರವಣಿಗೆಯು ಪೂಜ್ಯ ಪಂಚಪೀಠ ಜಗದ್ಗುರುಗಳ ಸಮ್ಮುಖದಲ್ಲಿ ಜರುಗುವುದು.
ತದನಂತರ ಸಾಮೂಹಿಕ ಉಡಿತುಂಬುವ ಕಾರ್ಯಕ್ರಮ ನಡೆಯಲಿದ್ದು, ಪೂಜ್ಯ ಪಂಚಪೀಠ ಜಗದ್ಗುರುಗಳ ದಿವ್ಯ ಆಶೀರ್ವಚನ ನಂತರ ಮಹಾಪ್ರಸಾದ ಜರುಗುತ್ತದೆ. ತದನಂತರ ನಾಡಿನ ಹೆಸರಾಂತ ಕಲಾವಿದರಿಂದ ಅದ್ದೂರಿ ರಸಮಂಜರಿ ಕಾರ್ಯಕ್ರಮ ನಡೆಯಲಿದೆ ಎಂದು ಪುಣ್ಯಕೋಟಿ ಆಶ್ರಮದ ಶ್ರೀಗಳಾದ ಡಾ. ರಮೇಶ್ ಕುಮಾರ್ ಶಾಸ್ತ್ರಿಯವರು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 