ಮೃತ ಕುಟುಂಬಕ್ಕೆ ಪರಿಹಾರ ನಿಧಿ ಚೆಕ್ ವಿತರಿಸಿದ : ಹೆಸ್ಕಾಂ ಅಧ್ಯಕ್ಷ ಖಾದ್ರಿ

ಮೃತ ಕುಟುಂಬಕ್ಕೆ ಪರಿಹಾರ ನಿಧಿ ಚೆಕ್ ವಿತರಿಸಿದ : ಹೆಸ್ಕಾಂ ಅಧ್ಯಕ್ಷ ಖಾದ್ರಿ Hescom President Qadri distributed relief fund cheques to the deceased family


ಶಿಗ್ಗಾವಿ 20  : ಸವಣೂರ ಐತಿಹಾಸಿಕ ಮೋತಿ ತಲಾಬ ಕೆರೆಯಲ್ಲಿ ಕಾಲು ಜಾರಿ ಬಿದ್ದು ಮೃತಪಟ್ಟ ಕಲ್ಲಪ್ಪ ಭೋವಿ ಅವರ ಪತ್ನಿ ರೇಣುಕಾ ಕಲ್ಲಪ್ಪ ಭೋವಿ ಅವರಿಗೆ ಹುಲಗೂರಿನ ತಮ್ಮ ಸ್ವಗೃಹ ಕಚೇರಿಯಲ್ಲಿ ಮುಖ್ಯಮಂತ್ರಿಗಳ 2 ಲಕ್ಷ ಪರಿಹಾರ ನಿಧಿ ಚೆಕ್‌ನ್ನು ಹೆಸ್ಕಾಂ ಅಧ್ಯಕ್ಷ, ಮಾಜಿ ಶಾಸಕ ಸೈಯ್ಯದ ಅಜ್ಜಂಪೀರ ಖಾದ್ರಿ ವಿತರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಖಾದ್ರಿ ನೋಂದವರ ಧ್ವನಿಯಾಗಿಸಿದ್ದರಾಮಯ್ಯನವರ ರಾಜ್ಯ ಸರಕಾರ ಕೆಲಸ ಮಾಡುತ್ತಿದೆ. ನಾನು ಕ್ಷೇತ್ರದ ಜನರ ಸಮಸ್ಯೆಗಳಿಗೆ ಸ್ಪಂದಿಸಿ ಕೆಲಸ ಮಾಡುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಮುಖಂಡರಾದ ಗೋಪಾಲಸ್ವಾಮಿ ಬಂಡಿವಡ್ಡರ, ನಾಗನಗೌಡ ಪೋಲಿಸ್ ಪಾಟೀಲ, ಮಲ್ಲಿಕಾರ್ಜುನ ದೇಸಾಯಿ, ಪಕರುಸಾಬ ಸವಣೂರ, ರುದ್ರೇಶ ಗುಡಗೇರಿ, ಅಡಿವೆಪ್ಪ ಹರಿಜನ, ಸಂಜೀವ ಪಾಳೆದ, ಬಸವರಾಜ ಹಂಚಿನಮನಿ, ಬಿರೇಶ ಜಟ್ಟೆಪ್ಪನವರ ಉಪಸ್ಥಿತರಿದ್ದರು.