ಹೃದಯಾಘಾತದಿಂದ ಮೃತಪಟ್ಟ ವೀರಯೋಧ ಮಹಾಂತೇಶ ಪಾಟೀಲ
Hero Mahantesh Patil dies of heart attack
ಹೃದಯಾಘಾತದಿಂದ ಮೃತಪಟ್ಟ ವೀರಯೋಧ ಮಹಾಂತೇಶ ಪಾಟೀಲ
ನೇಸರಗಿ 10: ಸಮೀಪದ ಮೊಹರೆ ಗ್ರಾಮದ ನಿವಾಸಿ ಭಾರತೀಯ ಸೇನೆಯಲ್ಲಿದ್ದ ವೀರಯೋಧ ಮಹಾಂತೇಶ ಚಂದ್ರ್ಪ ಪಾಟೀಲ(40) ಕರ್ತವ್ಯದಲ್ಲಿದ್ದಾಗ ಹೃದಯಾಘಾತದಿಂದ ನಿಧನರಾದ ಪ್ರಯುಕ್ತ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ಬುಧುವಾರ ನಡೆಯಿತು.
ಕಳೆದ 17 ವರ್ಷಗಳಿಂದ ಸೇನೆಯಲ್ಲಿದ್ದ ಅವರು ಪಶ್ಚಿಮ ಬಂಗಾಳದ ಪಾನಾಗಡ ಜಿಲ್ಲೆಯ ದುರ್ಗಾಪೂರದ ಬೆಟಾಲಿಯನ್ ಸಿಎಂಪಿ 59 ರೆಜಿಮೆಂಟದಲ್ಲಿ ಸೇವೆಯಲ್ಲಿದ್ದರು. ಸೋಮವಾರ ಹೃದಯಾಘಾತದಿಂದ ನಿಧನರಾಗಿದ್ದು ಅವರ ಪಾರ್ಥಿವ ಶರೀರವನ್ನು ಸಕಲ ಗೌರವಗಳೊಂದಿಗೆ ಗ್ರಾಮದ ಪ್ರಮುಖ ಪ್ರಮುಖ ಬೀದಿಯಲ್ಲಿ ಮೆರವಣಿಗೆ ನಡೆಸಲಾಯಿತು.
ಸುಬೇದಾರ ಸಂತೋಷ ಗುರವ, ನೇಸರಗಿ ಪಿಎಸ್ಐ ಈರ್ಪ ರಿತ್ತಿ, ಮೊಹರೆ ಮಾಜಿ ಸೈನಿಕ ಸಂಘದ ಅಧ್ಯಕ್ಷ ಸಾಯಲ್ಲಪ್ಪ ತಳವಾರ, ಸುಬೇದಾರ ಸುರೇಶ ಬರಗಾಲಿ, ಅಖಿಲ ಕರ್ನಾಟಕ ಮಾಜಿ ಸೈನಿಕ ಸಂಘದ ಅಧ್ಯಕ್ಷ ಬಸಪ್ಪ ತಳವಾರ, ದೇಶನೂರ ಮಾಜಿ ಸೈನಿಕ ಸಂಘದ ಅಧ್ಯಕ್ಷ ಮಲ್ಲಪ್ಪ ಕೇದಾರಿ, ನೇಸರಗಿ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಈರ್ಪ ಸೋಮಣ್ಣವರ ಪಾಲ್ಗೊಂಡಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 