ನಾಳೆಯಿಂದ ಹಜರತ್ ಸದರ್ ಶಾಹ ವಲಿ (ರ.ಅ) ಉರುಸು ಆಚರಣೆ ಕಾರ್ಯಕ್ರಮ
Hazrat Sadar Shah Wali (RA) Urs Celebration Program from Tomorrow
ಕೊಪ್ಪಳ 12 : 224 ನೇ ಹಜರತ್ ಸೈಯದ್ ಸದರ್ ಶಾಹ ವಲಿ (ರ.ಅ) ಉರುಸು ಆಚರಣೆ ಕಾರ್ಯಕ್ರಮ.ದಿ,-14/ ರಿಂದ 16 ರ ವರೆಗೇ ಮೂರು ದಿನಗಳ ಕಾಲ ಸಂದಲ (ಗಂಧ ) ಉರುಸ್ ಹಾಗೂ ಜಿಯಾರತ್ ಮತ್ತು ಪುರುಷ ಅಂಗವಾಗಿ ಧಾರ್ಮಿಕ ಪ್ರವಚನ ಕಾರ್ಯಕ್ರಮ ನಡೆಯಲಿದೆ ಎಂದು. ಉರುಸು ಉಸ್ತುವಾರಿ ಅಧ್ಯಕ್ಷ ಸೈಯದ್ ಅಲಿ ಹುಸೇನಿ ಹೇಳಿದರು. ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾ ಗೋಷ್ಠಿ ಉದ್ದೇಶಿಸಿ ಮಾತನಾಡಿದ ಇವರು-14 ರ ಬುಧವಾರ ನಗರದ ತೆಗ್ಗಿನಕೇರಿ ಓಣಿಯಿಂದ ಗಂಧ ಹೊರಡುವುದು, ದಿನಾಂಕ:-15 ಗುರುವಾರ ಉರುಸು ನಡೆಯುವುದು, ಅನ್ನ ಸಂತರೆ್ಣ , ಮತ್ತು ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯುವುದು,
ಶಾಸಕ ರಾಘವೇಂದ್ರ ಹಿಟ್ನಾಳ್, ಸಂಸದ ರಾಜಶೇಖರ್ ಹಿಟ್ನಾಳ್, ಸಿ ವಿ ಚಂದ್ರಶೇಖರ, ಡಾ:ಬಸವರಾಜ್ ಕ್ಯಾವಟರ್, ಇನ್ನು ಅನೇಕ ಗಣ್ಯರ ಉಪಸ್ಥಿತಿಯಲ್ಲಿ, ಕಾರ್ಯಕ್ರಮ ನೆರವೇರಿಸಲಾಗುವುದು.ದಿನಾಂಕ:-16 ರ ಶುಕ್ರವಾರ ಜಿಯಾರತ್ ನಡೆಯುವುದು, ಉರುಸು ಕಾರ್ಯಕ್ರಮವು ಸೂಫಿ ಸಂತರು ಹಾಗೂ ಪವಿತ್ರ ವ್ಯಕ್ತಿಗಳ ಸ್ಮರಣಾರ್ಥ ನಡೆಯುವ ಒಂದು ಧಾರ್ಮಿಕ ಆಚರಣೆ ಆಗಿದೆ ಎಂದು ಹೇಳಿದರು. ಈ ಸಂಧರ್ಭದಲ್ಲಿ ಸೈಯದ್ ನಸರುದ್ದಿನ್, ಸೈಯದ್ ಆದಮ್ ಹುಸೇನಿ, ಸೈಯದ್ ಆಬಿದ್ ಹುಸೇನಿ, ಸೈಯದ್ ಷೇರು ಹುಸೇನಿ ಇನ್ನು ಅನೇಕರು ಉಪಸ್ಥಿತರಿದ್ದರು.
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ 