ಫೈಜಾನೆ ಖಾದ್ರಿಯ ದಿಂದ ಹಜರತ್ ಅಲಿ ಯವರ ಜಯಂತಿ ಹಾಗೂ ಅಜ್ಮೀರ್ ದರ್ಗಾದ ಉರುಸ್ ಆಚರಣೆ
Hazrat Ali Jayanti and Urus celebrations at Ajmer Dargah by Faizane Qadri
ಕೊಪ್ಪಳ 10: ಹಜರತ್ ಮೌಲಾ ಅಲಿ (ರ) ರವರ ಜಯಂತಿ ಪ್ರಯುಕ್ತ ಆಸಾರೆ ಮುಬಾರಕ್ ಹಾಗೂ ಅಜ್ಮೀರ್ ದರ್ಗಾದ ಹಜರತ್ ಖಾಜಾ ಗರೀಬ್ ನವಾಜ್ ರವರ ಉರುಸ್ ಪ್ರಯುಕ್ತ ನಗರದ ನಿರ್ಮಿತಿ ಕೇಂದ್ರ ಬಡಾವಣೆಯಲ್ಲಿರುವ ಖಾದರಿಯ ಪೀಠದ ಆವರಣದಲ್ಲಿ ಧಾರ್ಮಿಕ ಪ್ರವಚನ ಕಾರ್ಯಕ್ರಮ ವಿಶೇಷ ಸಾಮೂಹಿಕ ಪ್ರಾರ್ಥನೆ ಕಾರ್ಯಕ್ರಮ ಜರುಗಿತು, ಫೈಜಾನೆ ಖಾದರಿಯ ಪೀಠದ ಭಕ್ತ ಸಮೂಹ ಮಂಡಳಿಯವರು ಆಯೋಜಿಸಿದ ಕಾರ್ಯಕ್ರಮದ ನೇತೃತ್ವ ಮತ್ತು ಸಾನಿಧ್ಯವನ್ನು ಖಾದರಿಯ ಖಾನಖಾ ಪೀಠದ ಪೀಠಾಧಿಪತಿ ಹಜರತ್ ಸೈಯದ್ ಶಾ ಅಬ್ದುಲ್ ವಹಾಬ ನಾಬೀರಾ ಖಾದ್ರಿ ಸಾಹೇಬ್ ಪೀರ್ ಸಾಲಗುಂದ ಶರೀಫ್ ರವರು ವಹಿಸಿ ಕಾರ್ಯಕ್ರಮದ ಕೊನೆಯಲ್ಲಿ ಆಶೀರ್ವಚನ ನೀಡಿದರು,
ಸಮಾರಂಭದಲ್ಲಿ ವಿಶೇಷ ಆಮಂತ್ರಿಕರಾಗಿ ಪಾಲ್ಗೊಂಡಿದ್ದ ಮುಕುಂದ ಶರೀಫ್ ಗಡ್ಡೆ ಖಾದರ್ ಭಾಷಾ ದರ್ಗಾದ ಪೀಠಾಧಿಪತಿ ಹಾಗೂ ನ್ಯಾಯವಾದಿ ಹಜರತ್ ಸೈಯದ್ ರಹೇಮತುಲ್ಲಾ ಖಾದ್ರಿ ಸಾಹೇಬ್ ರವರು ಮೌಲಾಯ ಕಾಯನಾಥ್ ಹೈದರ್ ಏ ಕರಾರ ಶೇರ್ ಏ ಖುದಾ ಜಾ ನಶೀನೇ ಪಯಂಬರ್ ಹಜರತ್ ಮೌಲಾ ಅಲಿ ರವರ ಜೀವನ ಚರಿತ್ರೆ ಕುರಿತು ಸಂಪೂರ್ಣ ಮಾಹಿತಿ ಜೊತೆಗೆ ಧಾರ್ಮಿಕ ಪ್ರವಚನ ಮಾಡಿದರು, ಈ ಸಂದರ್ಭದಲ್ಲಿ ಗುರುಗಳಾದ ಹಜರತ್ ಸೈಯದ್ ಶಾ ಸಮೀರ್ ಪಾಷಾ ಖಾದ್ರಿ,ಜಾಕಿರ್ ಹುಸೇನ್ ಖಾದ್ರಿ ಸಾಲಗುಠಾ ,ಹಿರಿಯ ಶಿಕ್ಷಕ ಎಂ ಎ ಕೈಯಂ ನಿವೃತ್ತಿ ಶಿಕ್ಷಕ ಸೈಯದ್ ಗೌಸ್ ಪಾಷಾ ಖಾಜಿ, ನಿವೃತ್ತಿ ವೃತ್ತಿ ಶಿಕ್ಷಕ ಅಮೀರ್ ಹಮ್ಜಾ ನದಾಫ್ ,ಹಿರಿಯ ಪತ್ರಕರ್ತ ಎಂ ಸಾಧಿಕ್ ಅಲಿ ಸೇರಿದಂತೆ ಫೈಜಾನೆ ಖಾದ್ರಿಯ ಪೀಠ ಕೇಂದ್ರದ ಭಕ್ತ ಸಮೂಹ ಮಂಡಳಿ ಕಾರ್ಯಕರ್ತರು ಪದಾಧಿಕಾರಿಗಳು ಹಾಗೂ ಅಭಿಮಾನಿಗಳು ವಿಶೇಷವಾಗಿ ಮಹಿಳೆಯರು ಪಾಲ್ಗೊಂಡಿದ್ದರು,
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 