ಹಾವೇರಿ ಜಿಲ್ಲಾ ದೇವಾಂಗ ಸಂಘ: ಪ್ರತಿಭಾ ಪುರಸ್ಕಾರ, ನಿವೃತ್ತ ನೌಕರರ ಸನ್ಮಾನ

ಹಾವೇರಿ ಜಿಲ್ಲಾ ದೇವಾಂಗ ಸಂಘ: ಪ್ರತಿಭಾ ಪುರಸ್ಕಾರ, ನಿವೃತ್ತ  ನೌಕರರ ಸನ್ಮಾನ Haveri District Devanga Sangha: Talent Award, Retired Employees Honored

 ರಾಣೆಬೆನ್ನೂರು 21 :  ಇಲ್ಲಿನ ಸಿದ್ದೇಶ್ವರ ನಗರದ ಕಾಕಿ ಜನ ಸೇವಾ ಸಂಸ್ಥೆ ಗಣೇಶೋತ್ಸವ( ನೀಲಕಂಠೇಶ್ವರ ದೇವಸ್ಥಾನ) ಮಂಟಪದಲ್ಲಿ, ಡಿಸೆಂಬರ್ 25, 2025 ರಂದು ಮುಂಜಾನೆ 10:30 ಗಂಟೆಗೆ ಹಾವೇರಿ ಜಿಲ್ಲಾ ದೇವಾಂಗ ಸಂಘವು, ಶೈಕ್ಷಣಿಕ ಪ್ರತಿಭಾವಂತ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ, ವಯೋವೃದ್ಧರು  ಮತ್ತು ನಿವೃತ್ತ ನೌಕರರ ಅಭಿನಂದನಾ ಸನ್ಮಾನ ನಡೆಯಲಿದೆ. ಎಂದು ಗೌರವಾಧ್ಯಕ್ಷ ಸಂಕಪ್ಪ ಮಾರನಾಳ, ಅಧ್ಯಕ್ಷ ಬಸವರಾಜ ಮೈಲಾರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು, ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಸ್ವಾಮಿ ಶ್ರೀ ಪ್ರಕಾಶಾನಂದಜಿ ಅವರು ದಿವ್ಯ ಸಾನಿಧ್ಯ ವಹಿಸುವರು. ಸಂಘದ ಅಧ್ಯಕ್ಷ ಬಸವರಾಜ ಮೈಲಾರ ಅಧ್ಯಕ್ಷತೆ ವಹಿಸುವರು. ರಾಜ್ಯ ದೇವಾಂಗ ಸಂಘದ ಅಧ್ಯಕ್ಷ ರವೀಂದ್ರ ಕಲಬುರ್ಗಿ ಸಮಾರಂಭ ಉದ್ಘಾಟಿಸುವರು. ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ ರಾಜೇಶ್, ನಾರಾಯಣಪ್ಪ ಮಂಡಕ್ಕಿ, ಮಾಜಿ ಶಾಸಕ ಅರುಣಕುಮಾರ ಪೂಜಾರ್, ಖ್ಯಾತ ನೆತ್ರ ಡಾ. ಚಂದ್ರಶೇಖರ್ ಕೇಲಗಾರ, ಲಕ್ಷ್ಮಿಕಾಂತ್ ಹುಲಗೂರ, ಸಂಕಪ್ಪ ಮಾರನಾಳ, ವಸಂತ ಕುಂಚೂರ, ಗಣೇಶ ಹಾವನೂರ ಮತ್ತಿತರರು ಪಾಲ್ಗೊಳ್ಳುವರು.