ಮಕರ ಸಂಕ್ರಾಂತಿಯಂದು ಹರಿಹರದಲ್ಲಿ ಹರಜಾತ್ರೆ

ಮಕರ ಸಂಕ್ರಾಂತಿಯಂದು ಹರಿಹರದಲ್ಲಿ ಹರಜಾತ್ರೆ Hara Jatre in Harihar on the occasion of Makar Sankranti

 

ದಾವಣಗೆರೆ 23: ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಗುರುಪೀಠದ ಆವರಣದಲ್ಲಿ ಜನವರಿ 15ರ ಮಕರ ಸಂಕ್ರಾಂತಿ ಹಬ್ಬದ ದಿನದಂದು ವಚನಾನಂದ ಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ಹರಜಾತ್ರೆ ನಡೆಯಲಿದೆ.  

ಕಿತ್ತೂರು ರಾಣಿ ಚನ್ನಮ್ಮ ದ್ವಿಶತಮಾನ ವಿಜಯೋತ್ಸವದ ಸಮಾರೋಪ ಸಮಾರಂಭ ಹಾಗೂ ಹರಪೀಠಾಧ್ಯಕ್ಷ ಲಿಂಗೈಕ್ಯ ಡಾ. ಮಹಾಂತ ಶಿವಾಚಾರ್ಯ ಸ್ವಾಮೀಜಿ ಅವರ 13ನೇ ಪುಣ್ಯಸ್ಮರಣೋತ್ಸವ ಮತ್ತು ವಚನಾನಂದ ಸ್ವಾಮೀಜಿ ಅವರ ಅಷ್ಟಮ ವಾರ್ಷಿಕ ಪೀಠಾರೋಹಣ ಕಾರ್ಯಕ್ರಮಗಳು ಹರಜಾತ್ರೆಯೊಟ್ಟಿಗೆ ನಡೆಯಲಿವೆ. ಹಾವೇರಿ ವೈದ್ಯ ಡಾ.ಬಸವರಾಜ ವೀರಾಪುರ ಅವರನ್ನು 2026ರ ಹರಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ಆಡಳಿತಾಧಿಕಾರಿ ಡಾ.ಎಚ್‌.ಪಿ. ರಾಜಕುಮಾರ ತಿಳಿಸಿದ್ದಾರೆ.