ಶಾಲಾ ದಿನಗಳ ಮಧುರ ನೆನಪುಗಳನ್ನು ಮೆಲುಕು ಹಾಕಲು ಗುರುವಂದನೆ ಕಾರ್ಯಕ್ರಮ
Guru Vandane program to relive sweet memories of school days
ಧಾರವಾಡ ದಿ 17: ಜನತಾ ಶಿಕ್ಷಣ ಸಮಿತಿ (ಎಖಖ) ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯ 2008-09ರ ಸಾಲಿನ ವಿದ್ಯಾರ್ಥಿಗಳು ತಮ್ಮ ಬಾಲ್ಯದ ಗುರುಗಳಿಗೆ ಗೌರವ ಸಲ್ಲಿಸಲು ಹಾಗೂ ತಮ್ಮ ಶಾಲಾ ದಿನಗಳ ಮಧುರ ನೆನಪುಗಳನ್ನು ಮೆಲುಕು ಹಾಕಲು ಭಾನುವಾರ (ನವೆಂಬರ್ 16, 2025) ರಂದು ಜನತಾ ಶಿಕ್ಷಣ ಸಮಿತಿ (ಎಖಖ) ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಭಾವಪೂರ್ಣ ಗುರುವಂದನೆ ಕಾರ್ಯಕ್ರಮವನ್ನು ಆಯೋಜಿಸಿದ್ದರು.
ಶಿಕ್ಷಕರು 2008-09ನೇ ಸಾಲಿನ ವಿದ್ಯಾರ್ಥಿಗಳ ಪ್ರತಿ ಪ್ರಯತ್ನ ಮತ್ತು ಚಟುವಟಿಕೆಗಳ ನೆನಪುಗಳನ್ನು ಮೆಲುಕು ಹಾಕಿ, ಅವರ ಪ್ರೀತಿಯನ್ನು ಮುಕ್ತಕಂಠದಿಂದ ಶ್ಲಾಘಿಸಿದರು. ಬಳಿಕ, ತಮ್ಮೆಲ್ಲಾ ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯಕ್ಕಾಗಿ ಆಶೀರ್ವಾದ ನೀಡಿ ಹಾರೈಸಿದರು. ಈ ಗುರುವಂದನೆ ಕಾರ್ಯಕ್ರಮವು ವಿದ್ಯಾರ್ಥಿಗಳ ಮತ್ತು ಗುರುಗಳ ನಡುವಿನ ಅನನ್ಯ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸಿ, ಎಲ್ಲರಿಗೂ ಮರೆಯಲಾಗದ ಸ್ಮರಣೀಯ ಕ್ಷಣಗಳನ್ನು ಸೃಷ್ಟಿಸಿತು.
ಈ ಸಂದರ್ಭದಲ್ಲಿ ಮುಖ್ಯೋಪಾಧ್ಯಾಯರಾದ ಮೈನಾವತಿ ದೀವಟೆ, ಶಿಕ್ಷಕರಾದ ಗಿರಿಜಾ ಕುರುವತ್ತಿ, ಅರುಣ್ ಕುಮಾರ್ ಅಂಗಡಿ, ವೃಷಭದೇವ್ ಕುರ್ಕುರಿ, ಮಂಜುನಾಥ್ ದಾಸನಕೊಪ್ಪ, ವಂದನಾ, ಜಯ ಮುಲಂಗಿ, ವಿಜಯಲಕ್ಷ್ಮಿ, ಶೀತಲ್ ಕುಂದಾರ್, ನದಾಫ್ ಮತ್ತು ಇತರ ಶಿಕ್ಷಕ ವೃಂದದವರಿಗೆ ವಿದ್ಯಾರ್ಥಿಗಳು ತಮ್ಮ ಪ್ರೀತಿಯ ಗುರುಗಳಿಗೆ ಫಲ-ಪುಷ್ಪ ಮತ್ತು ಸ್ಮರಣಿಕೆ ನೀಡಿ, ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಾದ ವೀರೇಶ, ವಿಶ್ವನಾಧ, ಸೋಮಶೇಖರ, ರವಿ, ಪ್ರವೀಣ, ಮಂಜುನಾಥ, ಭಾಗೀರಥಿ, ಮಂಜುಳಾ, ಅರ್ಚನಾ, ಸಂಗೀತ, ಸೌಮ್ಯ, ಪ್ರಜ್ಞಾ, ನೇತ್ರಾವತಿ, ನಿಖಿತಾ, ರಂಜಿತಾ ಜಾಧವ, ಹನುಮಂತ, ಮುತ್ತು, ರಾಘವೇಂದ್ರ, ವಿಶಾಲ, ಪ್ರಮೋದ್, ಶಾಂತವೀರ, ರಾಜಶೇಖರ, ಹರೀಶ, ಆಸಿಫ, ಆನಂದ, ಗಣೇಶ ಮತ್ತು ರಮೇಶ ಸೇರಿದಂತೆ 2008-09ರ ಬ್ಯಾಚ್ನ ಎಲ್ಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 