ಕೊಟ್ಟೂರು ನಗರ ಅಭಿವೃದ್ಧಿಗೆ ಹೆಚ್ಚಿನ ಅದ್ಯತೆ: ಶಾಸಕ ನೇಮಿರಾಜ್ ನಾಯ್ಕ್‌

Greater priority for Kottoor city development: MLA Nemiraj Naik

ಕೊಟ್ಟೂರು ನಗರ ಅಭಿವೃದ್ಧಿಗೆ ಹೆಚ್ಚಿನ ಅದ್ಯತೆ: ಶಾಸಕ ನೇಮಿರಾಜ್ ನಾಯ್ಕ್‌  

ಕೊಟ್ಟೂರು 26 : ತಾಲ್ಲೂಕು ಕ್ರೀಡಾಂಗಣದಲ್ಲಿ ಭಾನುವಾರ 76ನೇ ಗಣರಾಜ್ಯೋತ್ಸವ ದಿನಾಚರಣೆ ಅಂಗವಾಗಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ, ಕೊಟ್ಟೂರು ನಗರ ಅಭಿವೃದ್ದಿಗೆ ಹೆಚ್ಚಿನ ಅದ್ಯತೆ ನೀಡುವುದಾಗಿ ಶಾಸಕ ನೇಮಿರಾಜ ನಾಯ್ಕ್‌ ಘೋಷಿಸಿದ್ದಾರೆ. 

ಈಗಾಗಲೇ ನಗರದ ಎಲ್ಲಾ ಬಡವಾಣೆ ಗಳಲ್ಲಿ ಮರುಢಾಂಬರೀಕರಣ ಸೇರಿದಂತೆ ಪುಟ್ ಪಾತ್ ಕಾಮಗಾರಿ ಭರದಿಂದ ಸಾಗಿದ್ದು, ಫೆಬ್ರವರಿ 22 ರಂದು ಶ್ರೀಗುರು ಕೊಟ್ಟೂರೇಶ್ವರ ಸ್ವಾಮಿ ರಥೋತ್ಸವ ಜರುಗಲಿದ್ದು ನಾಡಿನ ಲಕ್ಷಾಂತರ ಜನ ಸೇರಲಿದ್ದು, ಇನ್ನೂ ಹೆಚ್ಚಿನ ಅಭಿವೃದ್ದಿ ಕೆಲಸಗಳನ್ನು ಜಾತ್ರೆಯೊಳಗೆ ಮಾಡಿ ಮುಗಿಸುವುದಾಗಿ ತಿಳಿಸಿದರು.ಪ್ರತಿ ವಾರ್ಡಿಗೆ 50 ಲಕ್ಷ ರೂ.ಗಳಂತೆ ನಿಗದಿ ಮಾಡಿ ಈಗಾಗಲೇ ಅನುದಾನ ಬಿಡುಗಡೆ ಮಾಡಿದ್ದು , ನಗರದಲ್ಲಿ ಕುಡಿಯುವ ನೀರು ಸೇರಿದಂತೆ ಅನೇಕ ಅಭಿವೃದ್ದಿಗೇ ಹೆಚ್ಚಿನ ಹಣ  ಬಿಡುಗಡೆ ಮಾಡಲು ಸಿದ್ದವಿದ್ದು  ಇನ್ನೂ ಹೆಚ್ಚಿನ ಹಣ ಬಿಡುಗಡೆ ಮಾಡಿ ಅಭಿವೃದ್ದಿ ಮಾಡಲು ಪ್ರಯತ್ನ ಮಾಡುವುದಾಗಿ ತಿಳಿಸುತ್ತಾ, ಕೊಟ್ಟೂರು ನಗರವನ್ನು ಕಡೆಗಣಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲವೆಂದು ಸ್ಪಷ್ಟಪಡಿಸಿದರು. 

ಮುಂದುವರೆದು ಮಾತನಾಡುತ್ತಾ, 1947 ರಲ್ಲಿ ದೇಶಕ್ಕೆ ಸ್ವಾತಂತ್ರ ಬಂದರೂ ಸಹ ಅನೇಕ ರಾಜ್ಯ ಸಂಸ್ಥಾನಗಳು ವೀಲೀನವಾಗದೇ  ಇದ್ದವು ಆ ಸಂಧರ್ಬದಲ್ಲಿ ದೇಶದ ಉಕ್ಕಿನ ಮನುಷ್ಯ ಎಂಬ ಖ್ಯಾತಿ ಗಳಿಸಿದ್ದ, ಸರ್ಧಾರ್ ವಲ್ಲಬಾಯಿ ಪಾಟೀಲ್ ರವರ ಸತತ ಪರಿಶ್ರಮದಿಂದ ಎಲ್ಲಾ 563 ಸಂಸ್ಥಾನಗಳು ನಮ್ಮ ದೇಶದೊಂದಿಗೆ ಒಗ್ಗೂಡಿದವು, ನಮ್ಮ ದೇಶ ಸೈನ್ಯ ಬಲದಲ್ಲಿ ಜಗತ್ತಿನಲ್ಲೇ 5ನೇ ಶಕ್ತಿಶಾಲಿ ರಾಷ್ಟ್ರವಾಗಿರುವುದು  ನಮ್ಮ ಹೆಮ್ಮೆಯಾಗಿದೆಯೆಂದರು. ಜಗತ್ತಿನ ಅತ್ಯಂತ ಬಲಶಾಲಿ ಪ್ರಜಾತಾಂತ್ರಿಕ ವ್ಯವಸ್ಥೆ ಇದ್ದು, ಸಂವಿಧಾನ ಕೂಡ ದೇಶದ ಅತ್ಮವೆಂದರು ನೂರಾರು ಜಾತಿ ಧರ್ಮ ಇದ್ದರೂ ಸಹ ಏಕ್ಯತೆ ಅಖಂಡತೆಗೆ ದಕ್ಕೆಯ ವಿಷಯ ಬಂದಾಗ ಎಲ್ಲರೂ ಒಗ್ಗೂಡಿ ಹೋರಾಡುವುದು ಇಲ್ಲಿನ ಸಂಸ್ಕೃತಿ , ಸಂಸ್ಕಾರದ ಪ್ರತೀಕವೆಂದರು.  

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಲ್ಲಾ ಅಧಿಕಾರಿ ವರ್ಗದವರಿಗೆ , ಸನ್ಮಾನಿತರಿಗೆ ಅಭಿನಂದನೆ ಸಲ್ಲಿಸುತ್ತಾ ಇನ್ನೂ ಹಗರಿಬೊಮ್ಮನಹಳ್ಳಿ ಪಟ್ಟಣದಲ್ಲಿ ಧ್ವಜಾರೋಹಣ ಮಾಡಲು ಹೋಗಬೇಕಾಗಿರುವುದರಿಂದ ಅಲ್ಲಿಯ ಅಧಿಕಾರಿ ವರ್ಗದವರು ಸಾರ್ವಜನಿಕರು ಕಾಯುತ್ತಿದ್ದು, ಅಲ್ಲಿಗೆ ಹೊರಡಬೇಕಾಗಿದೆ ಎಂದು ತಿಳಿಸುತ್ತಾ, ಸಭೆಯ ಕಾರ್ಯಕ್ರಮ ಮುಗಿಸಿ ಹೊರಟರು.