ಯಜೋಟಿಕಾ ಕಾಲೋನಿ ಹಾಗೂ ಸಾಯಿ ರೆಸಿಡೆನ್ಸಿ ವತಿಯಿಂದ ಅದ್ಧೂರಿ ಗಣರಾಜ್ಯೋತ್ಸವ
ವಿಜಯಪುರ 26 :ಯಜೋಟಿಕಾ ಕಾಲೋನಿ ಹಾಗೂ ಸಾಯಿ ರೆಸಿಡೆನ್ಸಿಯ ವಿನಾಯಕ ವೃತದಲ್ಲಿ ಗಣರಾಜ್ಯೋತ್ಸವ ಆಚರಣೆ ಮಾಡಲಾಯಿತು. ಬಡಾವಣೆಯಎಲ್ಲ ನಿವಾಸಿಗಳು ತಾಯಂದಿರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ನಿವೃತ್ತ ಶಿಕ್ಷಕರಾದ ಮಮದಾಪುರ್ ಗುರುಗಳು ಧ್ವಜಾರೋಹಣ ನೆರವೇರಿಸಿದರು.
ಈ ಕಾರ್ಯಕ್ರಮದಲ್ಲಿ ಎಂ ಆರ್ ಬಿರಾದಾರ್ ,ಎಸ್ .ಡಿ. ಕೃಷ್ಣಮೂರ್ತಿಗಜಾನನೋತ್ಸವ ಸೇವಾ ಸಮಿತಿ ಅಧ್ಯಕ್ಷರಾದ ವಿಜಯ ವಿಠ್ಠಲ್ ಪೂಜಾರಿ , ಸಮಾಜಸೇವಕರಾದ ಸಿದ್ದು ಇಜೇರಿ,
ಕುಂಬಾರ್ ಗುರುಗಳು, ಪಂಡಿತರಾವ್ ಪಾಟೀಲ್ ಗುರುಗಳು, ಗೌರಾ ಬಾಯಿ ಕುಬಕಡ್ಡಿ, ಶೋಭಾ ಕಸನಕ್ಕೆ, ಶಾಂತ ಬಿರಾದಾರ್, ದೇವಕಿ ನಾಯಕ್ ಸೇರಿದಂತೆ ಅನೇಕ ಹಿರಿಯರುಇದರಲ್ಲಿ ಭಾಗವಹಿಸಿದ್ದರು.