ಸರ್ಕಾರದಿಂದ ಆರ್ಥಿಕ ಸಾಮಾಜಿಕ ಮತ್ತು ಜಾತಿಗಣತಿ ಪ್ರಾರಂಭ
Government begins economic, social and caste census
ಸರ್ಕಾರದಿಂದ ಆರ್ಥಿಕ ಸಾಮಾಜಿಕ ಮತ್ತು ಜಾತಿಗಣತಿ ಪ್ರಾರಂಭ
ಬೈಲಹೊಂಗಲ 24: ಕರ್ನಾಟಕ ಪ್ರದೇಶ ಹಿಂದೂ ಕ್ಷತ್ರಿಯ ಸಮಾಜದಿಂದ ರಂದು ಸಮೀಪದ ಬೂದಿಗೊಪ್ಪ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಸರ್ಕಾರದಿಂದ ಆರ್ಥಿಕ ಸಾಮಾಜಿಕ ಮತ್ತು ಜಾತಿಗಣತಿ ಪ್ರಾರಂಭ ಮಾಡಿದ್ದು ಇದರ ಬಗ್ಗೆ ಸಮಾಜಕ್ಕೆ ತಿಳಿವಳಿಕೆ ಮೂಡಿಸುವ ಬಗ್ಗೆ ಸಭೆ ನಡೆಯಿತು. ಧರ್ಮ ಕಾಲಂದಲ್ಲಿ ಹಿಂದೂ ಜಾತಿ, ಕ್ಷತ್ರಿಯ ಉಪಜಾತಿ, ಹಿಂದೂ ಕ್ಷತ್ರಿಯ ಎಂದು ಸಮಾಜ ಬಾಂಧವರು ಗಣತಿಗೆ ಬಂದಾಗ ಮೇಲೆ ತಿಳಿಸಿದ ಪ್ರಕಾರ ಹೇಳಬೇಕು. ಕರ್ನಾಟಕದಲ್ಲಿ ಒಟ್ಟು ಸಮಾಜದ ಜನಸಂಖ್ಯೆ ಎಷ್ಟು ಅಂತ ನಿಖರವಾದ ಮಾಹಿತಿ ಸಿಗುವುದು ಎಂದು ಡಾ. ಎಚ್.ಎಫ್ . ಯೋಗಪ್ಪನವರ ತಿಳಿಸಿದರು .ಸಭೆಯ ಅಧ್ಯಕ್ಷತೆಯನ್ನು ರಾಮುನಗೌಡ ಪಾಟೀಲ ಇವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಎಂ. ಡಿ. ಹುಲಮನಿ ನಿವೃತ್ತ ಎಸ್ಪಿ ,ಬಿ .ಎಸ್ .ನಾಯಕ್ ರಾಜ್ಯ ಉಪಾಧ್ಯಕ್ಷರು, ಅಶೋಕ್ ಸಿಗ್ನಹಳ್ಳಿ ಮುಂಡರಗಿ ರಾಜ್ಯ ಪ್ರಧಾನ ಕಾರ್ಯದರ್ಶಿ, ಹನುಮಂತಪ್ಪ ದೊಡಮನಿ, ಹೊನ್ನೂರ್ ನಿವೃತ್ತ ಸಿಪಿಐ, ಶ್ರೀಮತಿ ರಾಧಾ ಶಾಮ್ ಕಾದ್ರೊಳ್ಳಿ ಮಾಜಿ ಜಿ.ಪಂ ಸದಸ್ಯೆ, ರಾಜ್ಯ ಕಾರ್ಯಕಾರಿ ಮಂಡಳಿ ಸದಸ್ಯ ಎಮ್. ಕೆ.ಹಲಗತ್ತಿ, ನಿವೃತ್ತ ಹಿರಿಯ ಅಧಿಕಾರಿ ಭೀಮಪ್ಪ ಪೂಜಾರ, ಸಮಾಜ ಹಿರಿಯ ಮುಖಂಡ ಆನಂದ್ ರಾವ್ ನಾಯ್ಕ್ ,ಸಮಾಜದ ಹಿರಿಯ ಮುಖಂಡ ಚಂದ್ರು ಜಂಬ್ರಿ ,ಅಧ್ಯಕ್ಷರು ಎಪಿಎಂಸಿ ಸವದತ್ತಿ ಈ ಸಂದರ್ಭದಲ್ಲಿ ರಾಜ್ಯ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ಶಿವಾನಂದ್ ಪೂಜಾರ ಇವರಿಗೆ ಸನ್ಮಾನಿಸಿ ಗೌರವಿಸಲಾಯಿತು. ಸಮಾಜದ ವಿವಿಧ ಸಂಘ ಸಂಸ್ಥೆ ಗಳ ಜನ ಪ್ರತಿನಿಧಿಗಳು ಮತ್ತು ಸಮಾಜದ ಮುಖಂಡರು ಭಾಗವಹಿಸಿದರು . ದಯಾನಂದ ಪೂಜಾರ ರಾಜ್ಯ ಕಾರ್ಯದರ್ಶಿ ಕಾರ್ಯಕ್ರಮವನ್ನು ನಿರೂಪಿಸಿದರು. ಶಿವಾನಂದ ಹುಲಿಕಟ್ಟಿ ಸ್ವಾಗತಿಸಿದರು. ಬಸವರಾಜ ಬಡಿಗೇರ ವಂದಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 