69 ನೇ ದಿನಕ್ಕೆ ಕಾಲಿಟ್ಟ ಸರಕಾರಿ ವೈದ್ಯಕೀಯ ಕಾಲೇಜು ಹೋರಾಟ ಸಮಿತಿ ಸೇನೆ

69 ನೇ ದಿನಕ್ಕೆ ಕಾಲಿಟ್ಟ ಸರಕಾರಿ ವೈದ್ಯಕೀಯ ಕಾಲೇಜು ಹೋರಾಟ ಸಮಿತಿ ಸೇನೆ  Government Medical College Struggle Committee Army enters 69th day

               ಮುದ್ದೇಬಿಹಾಳ 25: ತಾಲ್ಲೂಕು ಘಟಕದ ಪ್ರಧಾನ ಕಾರ್ಯದರ್ಶಿಗಳಾದ ಬಸನಗೌಡ ಪಾಟೀಲ  ಮಾತನಾಡುತ್ತಾ ಡಾಕ್ಟರ್ ಮಕ್ಕಳು ಡಾಕ್ಟರ್ ಆಗುತ್ತಿದ್ದಾರೆ, ಇಂಜಿನಿಯರ್ ಮಕ್ಕಳು ಇಂಜಿನಿಯರ್ ಆಗುತ್ತಿದ್ದಾರೆ ಆದರೆ ಬಡವರ ಮಕ್ಕಳು ಬಡವರಾಗಿಯೆ ಉಳಿಯುತ್ತಿದ್ದಾರೆ, ಬಡವರ ಮಕ್ಕಳು ಉನ್ನತ ಶಿಕ್ಷಣ ಪಡೆಯುವಂತಾಗಬೇಕು.ಬಡವರ ಮಕ್ಕಳಿಗೆ ಕೋಟಿಗಟ್ಟಲೆ ಹಣ ಕೊಟ್ಟು ಓದುವ ಸಾಮರ್ಥ್ಯ ಇರುವುದಿಲ್ಲ ಅದಕ್ಕಾಗಿ ಸರಕಾರಿ ವೈದ್ಯಕೀಯ ಕಾಲೇಜು ಆರಂಭಿಸಬೇಕು ಎಂದು ಹೇಳಿದರು.

              ಪ್ರತಿ ನೂರು ಜನಸಂಖ್ಯೆಗೆ ಒಬ್ಬ ವೈದ್ಯರಿರಬೇಕು ಆದರೆ ಸಾವಿರ ಜನಸಂಖ್ಯೆಗೆ ಒಬ್ಬರು ಡಾಕ್ಟರ್ ಇಲ್ಲ ಇದು ನಮ್ಮ ದೇಶದ ವಿಪರ್ಯಾಸ. ಸರಕಾರ ಮತ್ತು ಜನಪ್ರತಿನಿಧಿಗಳು ಈ ಹೋರಾಟಕ್ಕೆ ಸ್ಪಂದಿಸದೆ ಹೋದರೆ ಮುಂದಿನ ಸರಕಾರ ನಮ್ಮನ್ನು ಎದುರಿಸಲು ತಯಾರಾಗಬೇಕಾಗುತ್ತದೆ ಎಂದು ಹೇಳಿದರು. ಹಸಿರು ಸೇನಾ ಘಟಕದ ಸದಸ್ಯರಾದ ಮಲ್ಲಿಕಾರ್ಜುನ ಬೀಸಲದಿನ್ನಿ, ಸಂಗಪ್ಪ ಕತ್ತಿ, ಎ ಎನ್ ಬಿದರಕುಂದಿ, ಮಲ್ಲನಗೌಡ ಬಿರಾದರ, ಅವಿನಾಶ ಐಹೊಳೆ ಹಾಗೂ ಹೋರಾಟ ಸಮಿತಿಯ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.