ಆದಿಜಾಂಬವ ಸಂಘದಿಂದ ಏರಿ್ಡಸಿದ್ದ ಬಸವಜಯಂತಿ ಕಾರ್ಯಕ್ರಮದಲ್ಲಿ ಬಸವೇಶ್ವರರ ಪುತ್ಥಳಿಗೆ ಮಾಲರೆ್ಣ
Garlands are laid on the statue of Basaveshwara at the Basava Jayanti program organized by the Adij
ಆದಿಜಾಂಬವ ಸಂಘದಿಂದ ಏರಿ್ಡಸಿದ್ದ ಬಸವಜಯಂತಿ ಕಾರ್ಯಕ್ರಮದಲ್ಲಿ ಬಸವೇಶ್ವರರ ಪುತ್ಥಳಿಗೆ ಮಾಲರೆ್ಣ
ಹಾವೇರಿ 01: ವಿಶ್ವಗುರುವ ಬಸವಣ್ಣನವರು ಶೋಷಣೆ ಮುಕ್ತ, ಸರ್ವಸಮಾನತೆಯ ನಾಡನ್ನು ಕಟ್ಟುವ ಕನಸಿಗಾಗಿ ತಮ್ಮ ಬದುಕನ್ನೇ ಮುಡಿಪಾಗಿಟ್ಟರು. ದೇವಸ್ಥಾನಗಳಲ್ಲಿ ಶೂದ್ರರಿಗೆ ಪ್ರವೇಶ ನೀಡದಿದ್ದುದನ್ನು ಪ್ರಶ್ನಿಸಿ ದೇವಸ್ಥಾನಗಳನ್ನೇ ಧಿಕ್ಕರಿಸಿದರು. ಉಚ್ಚ- ನೀಚ ಎಂದು ಭೇದ ಎಣಿಸದೇ ಎಲ್ಲರನ್ನು ಒಳಗೊಂಡ ಸಮಾನತೆಯ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ ಬಸವಣ್ಣನವರಿಗೆ ಬಸವಣ್ಣನವರೆ ಸಾಟಿ ಎಂದು ಲಿಡ್ಕರ್ ನಿಗಮದ ಮಾಜಿ ಉಪಾಧ್ಯಕ್ಷ ಡಿ.ಎಸ್.ಮಾಳಗಿ ಹೇಳಿದರು.ಬುಧವಾರ ಜಿಲ್ಲಾ ಆದಿಜಾಂಬವ ಸಂಘದಿಂದ ಏರಿ್ಡಸಿದ್ದ ಬಸವಜಯಂತಿ ಕಾರ್ಯಕ್ರಮದಲ್ಲಿ ಬಸವೇಶ್ವರರ ಪುತ್ಥಳಿಗೆ ಮಾಲರೆ್ಣ ಮಾಡಿ ಅವರು ಮಾತನಾಡಿದರು. ಮಾದಾರ ಚನ್ನಯ್ಯ, ಡೋಹರ ಕಕ್ಕಯ್ಯ, ಸಮಗಾರ ಹರಳಯ್ಯ, ಮಾದಾರ ದೂಳಯ್ಯ, ಉರಿಲಿಂಗ ಪೆದ್ದಿ, ಮೇದಾರ ಕೇತಯ್ಯ, ಕುಂಬಾರ ಗುಂಡಯ್ಯ, ಕುರುಬಗೊಲ್ಲಾಳ, ತಳವಾರ ರಾಮಯ್ಯ, ಈಳಿಗೇರ ಮಾರಯ್ಯ, ಒಕ್ಕಲಿಗರ ಮುದ್ದಣ್ಣ, ನುಲಿಯ ಚೆಂದಯ್ಯ, ಸೂಳೆ ಸಂಕವ್ವೆ, ಅಮುಗೆ ರಾಯಮ್ಮ ಸೇರಿದಂತೆ ನೂರಾರು ಶರಣ ಪಡೆಕಟ್ಟಿಕೊಂಡು ವಚನಗಳನ್ನು ರಚಿಸುವ ಮೂಲಕ ಸಮಾನತೆಗೆ ಹೋರಾಡಿದರು. ಅವರ ತತ್ವಗಳನ್ನು ನಾವಿಂದು ಅಳವಡಿಸಿಕೊಳ್ಳಬೇಕಿದೆ ಎಂದರು, ಅಧ್ಯಕ್ಷತೆಯನ್ನು ನ್ಯಾಯವಾದಿ, ಆದಿಜಾಂಬವ ಸಂಘದ ಜಿಲ್ಲಾಧ್ಯಕ್ಷ ನಾಗರಾಜ ಮಾಳಗಿ ವಹಿಸಿದ್ದರು, ಅಶೋಕ ಮರೆಣ್ಣನವರ, ಮಲ್ಲೇಶ ಕಡಕೋಳ, ಶಿವಬಸಪ್ಪ ಚೌಶೆಟ್ಟಿ, ನಾಗರಾಜ ಮೇದಾರ ಸೇರಿದಂತೆ ಅನೇಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 