ಸಮುದ್ರ ಮಂಥನ ವಿಷ್ಣು ಅವತಾರದಲ್ಲಿ ಮೇದಾರ ಓಣಿಯ ಗಣೇಶ
Ganesha of Medara Oni in the avatar of Vishnu, the churning of the ocean
ಸಮುದ್ರ ಮಂಥನ ವಿಷ್ಣು ಅವತಾರದಲ್ಲಿ ಮೇದಾರ ಓಣಿಯ ಗಣೇಶ
ರಾಣೇಬೆನ್ನೂರು 28 : ಇಲ್ಲಿನ ಶಿವಶರಣ ಮೇದಾರ ಕೇತೇಶ್ವರ ಯುವಕ ಸಂಘವು ಪ್ರತಿ ವರ್ಷದಂತೆ ಈ ವರ್ಷವೂ ಸಹ ಅತ್ಯಂತ ಸ್ಪರ್ಧಾತ್ಮಕ ಮತ್ತು ಸರಳವಾಗಿ ತಮ್ಮ ವೃತ್ತಿ ಕೌಶಲ್ಯತೆಗೆ ಬಳಸುವ ಪರಿಪೂರ್ಣ ಬಿದಿರಿನಲ್ಲಿ ತಮ್ಮ ಕೌಶಲ್ಯತೆ ಮೆರೆದು ಮಹಾಮಂಟಪವನ್ನು ನಿರ್ಮಿಸಿ ಮತ್ತಷ್ಟು ಸಾಧನೆಯಲ್ಲಿ ತೊಡಗಿ ಜನಾಕರ್ಷಣೆಗೆ ಮುಂದಾಗಿದ್ದಾರೆ.
ಈ ಸಾರಿ ಸಮುದ್ರ ಮಂಥನ ರೂಪಕದಲ್ಲಿ ಆಮೆಯ ಮೇಲೆ ವಿಷ್ಣು ಅವತಾರದಲ್ಲಿ ಗಣೇಶನನ್ನು ಪ್ರತಿಷ್ಠಾಪಿಸಿದ್ದಾರೆ. ವಾಣಿಜ್ಯ ನಗರದಲ್ಲಿ ಪ್ರತಿಷ್ಠಾಪನೆಯಾಗುತ್ತಿರುವ, ಮೇದಾರ ಓಣಿಯ ಈ ಮಂಥನ ಗಣೇಶನನ್ನು ನೋಡಲು, ನಾಡಿನ ಜನತೆ ಹರಿದು ಬರುವುದು ಸಾಮಾನ್ಯ ಸಂಗತಿಯಾಗಲಿದೆ ಮತ್ತಷ್ಟು ವಿಶೇಷ ಸಾಧನೆಗೆ ಮುಂದಾಗಿದ್ದು, ಪ್ರಸಂಸನೀಯ.
ಈ ಸಂದರ್ಭದಲ್ಲಿ ಸಮಾಜದ ಉಪಾಧ್ಯಕ್ಷ ಮಂಜುನಾಥ ಕೆ.ಗುಡದಳ್ಳಿ, ಗಜಾನನ ಸಮಿತಿ ಅಧ್ಯಕ್ಷ ರವಿ ಬಿ ಮೇದಾರ, ಸಮಾಜದ ಅಧ್ಯಕ್ಷ ಲಕ್ಷ್ಮಣ್ ಅಮರೇಶಪ್ಪ ಗುಡದಳ್ಳಿ, ಮಾಜಿ ಅಧ್ಯಕ್ಷ ಕೃಷ್ಣಪ್ಪ ಗುಡದಳ್ಳಿ,ಕಾರ್ಯದರ್ಶಿ ರಾಘವೇಂದ್ರ ಕೆ. ಅಬ್ಬಿಗೇರಿ, ಕೋಶಾಧ್ಯಕ್ಷ ರಾಘವೇಂದ್ರ ಎಸ್ ಅಬ್ಬಿಗೇರಿ, ಪದಾಧಿಕಾರಿಗಳಾದ ಕೃಷ್ಣಪ್ಪ ಗುಡದಳ್ಳಿ, ಶ್ರೀಕಾಂತ ಗುಡಿಗೇರಿ, ಟಿ. ಈಶ್ವರ್, ಕರಬಸಪ್ಪ ಚಳಗೇರಿ, ಮಂಜುನಾಥ ನಾಣಿಕೇರಿ, ಹನುಮಂತಪ್ಪ ಗುಡಿಗೇರಿ, ದುರಗಪ್ಪ ಬಜ್ಜಿ, ಅಲಂಕಾರ ಕೌಶಲ್ಯದ ಗಂಗಾಧರ ಗುಡಗೇರಿ, ಹರೀಶ್ ಬಾದರದಂಡಿ ಸೇರಿದಂತೆ, ಸಮಾಜದ ಮುಖಂಡರು ಯುವಕರು ಮತ್ತು ಮಹಿಳೆಯರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 