ನೂರಾರು ಸದ್ಭಕ್ತರಿಗೆ ಪಾಂಡುರಂಗ ಭಕ್ತನಿಂದ ಉಚಿತ ಯಾತ್ರೆ
Free pilgrimage for hundreds of devotees from Panduranga devotee
ಮಹಾಲಿಂಗಪುರ 13: ಜನವರಿ 15ರಂದು ಪಂಢರಪುರ ಶ್ರೀಕ್ಷೇತ್ರದ ದರ್ಶನ ಮಾಡಿಸಲು ಸುಮಾರು 750 ಜನರನ್ನು ತಮ್ಮದೇ ಖರ್ಚಿನಲ್ಲಿ ಕರೆದೊಯ್ಯಲು ಸ್ಥಳೀಯ ಪಾಂಡುರಂಗನ ಭಕ್ತರಾದ ರಾಂಭವ ಟೆಕ್ಷಟಾಯಿಲ್ಸ್ ಮಾಲೀಕ ಬಾಲಕೃಷ್ಣ ಮಾಳವದೆ ಹೋದ ವರ್ಷದಂತೆ ಈ ವರ್ಷವೂ ಸಂಕಲ್ಪ ಮಾಡಿದ್ದಾರೆ.
ದೈವ ಭಕ್ತರಾದ ಇವರು ಕಳೆದ ವರ್ಷವೂ ಕೂಡ ಮಕರ ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿಯೇ ಸುಮಾರು 300 ಜನರಿಗೆ ಊಟೋಪಚಾರ ಸಹಿತ ಉಚಿತವಾಗಿ ಪಂಡರಪುರ ದರ್ಶನ ಮಾಡಿಸಿದ್ದರು. ಏನೆ ಇರಲಿ ಮುಂದಿನ ವರ್ಷವೂ ಕೂಡ ನಾವು ಹೆಚ್ಚಿನ ಸಂಖ್ಯೆಯಲ್ಲಿ ಸಾವಿರ ಜನರಿಗೆ ಯಾತ್ರೆ ಮಾಡಿಸಬೇಕೆಂಬ ಚಿಂತನೆಯಲ್ಲಿದ್ದೇವೆ ಎನ್ನುತ್ತಾರೆ ಮಾಳವದೆಯವರು.
ಜನವರಿ 15ರಂದು ಬೆಳಿಗ್ಗೆ ಸರಿಯಾಗಿ 5 ಗಂಟೆ ಸುಮಾರಿಗೆ ಬಸ್ಸು ಮತ್ತು ಇನ್ನಿತರ ವಾಹನಗಳ ಮೂಲಕ ಪ್ರಯಾಣ ಆರಂಭವಾಗಿ, ಶ್ರೀಕ್ಷೇತ್ರ ಢಪಳಾಪುರದ ಶ್ರೀಗುರು ಗುರುಲಿಂಗೇಶ್ವರ ದರ್ಶನ ತರುವಾಯ ಸದ್ಭಕ್ತರೆಲ್ಲ ಮುಂಜಾನೆಯ ಉಪಹಾರ ಪೂರೈಸಿಕ್ಕೊಳ್ಳುವರು.
ನಂತರ ಮಧ್ಯಾಹ್ನ ಗುಡ್ಡಾಪುರ ದಾನಮ್ಮದೇವಿ ದರ್ಶನಕ್ಕೆ ತೆರಳಿ ಮತ್ತೆ ಪರತ ಪಂಡರಪುರಕ್ಕೆ ಆಗಮಿಸಿ ಮಧ್ಯಾಹ್ನ ಮತ್ತು ಸಂಜೆ ದೇವರ ದರ್ಶನ ಮಾಡಿಕ್ಕೊಂಡು ರಾತ್ರಿ ಹೊತ್ತಿನ ಪ್ರಸಾದ ಸ್ವೀಕರಿಸಿ ಮರಳಿ ಮಹಾಲಿಂಗಪುರಕ್ಕೆ ಪ್ರಯಾಣ ಬೆಳೆಸಲಾಗುವುದು. ಇದನ್ನೆಲ್ಲ ನೋಡಿದರೆ ಸಾಮಾಜೀಕ ಮತ್ತು ಧಾರ್ಮಿಕ ಕಾರ್ಯಗಳಲ್ಲಿ ರಾಂಭವ ಗಾಮೆಂರ್ಟ್ ಕೊಡುಗೆ ಅನನ್ಯ.ಹೆಚ್ಚಿನ ಮಾಹಿತಿಗಾಗಿ ಮೋ.ಸಂಖ್ಯೆ- 9972144777 ಕ್ಕೆ ಸಂಪರ್ಕಿಸಲು ಕೋರಲಾಗಿದೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 