ವುಡ್ ಇಂಡಸ್ಟ್ರೀಜಗೆ ಅಗ್ನಿ ದುರಂತ : ಲಕ್ಷಾಂತರ ರೂ ಮೌಲ್ಯದ ವಸ್ತುಗಳು ಭಸ್ಮ
Fire disaster for wood industry: Goods worth lakhs of rupees gutted
ಮುಂಡಗೋಡ 07: ವುಡ್ ಇಂಡಸ್ಟ್ರೀಜಗೆ ಅಕಸ್ಮಿಕ ಬೆಂಕಿ ತಗುಲಿ ಲಕ್ಷಾಂತರ ರೂ ಮೌಲ್ಯದ ಸಾಗವಾನಿ ಕಟ್ಟಿಗೆ ಹಾಗೂ ಯಂತ್ರಗಳು ನಾಶವಾದ ಘಟನೆ ಪಟ್ಟಣದ ಕಿಲ್ಲೆ ಓಣಿಯಲ್ಲಿ ಭಾನುವಾರ ಬೆಳಗಿನ ಜಾವ ನಡೆದಿದೆ. ವುಡ್ ಇಂಡಸ್ಟ್ರೀಜ ಮಾಲಿಕನನ್ನು ಯೂಸೂಫ್ ಹೊಸಕೊಪ್ಪ (ಸಾಗರ)ಎಂದು ತಿಳಿದು ಬಂದಿದೆ.ಕಟ್ಟಿಗೆಯಿಂದ ವಿವಿಧ ನಮೂನೆ ಪಿಠೋಪಕರಣಗಳನ್ನು ಮಾಡಿ ಮಾರಾಟ ಮಾಡುತ್ತಿದ್ದ ಯೂಸೂಫ್ ಸಾಗವಾನಿಕಟ್ಟಿಗೆಯಿಂದ ಹೊಸ ಹೊಸ ನಮೂನೆಯ ಪಿಠೋಪಕರಣ ಮಾಡುತ್ತಿದ್ದರಿಂದ ತಾಲೂಕಾ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಇತನು ಮಾಡುವ ಸಾಗವಾನಿ ಉಪಕರಣಗಳಿಗೆ ಭಾರಿ ಬೇಡಿಕೆ ಇದೆ.
ಭಾನುವಾರ ಬೆಳಗಿನ ಜಾವ ವುಡ್ ಇಂಡಸ್ಟ್ರೀಜ್ ಬೆಂಕಿ ತಗುಲಿದೆ ಫರ್ನಿಚರ ಮಾಡಲು ಸಂಗ್ರಹಿಸಿದ ಹಾಗೂ ಫರ್ನಿಚರ ಮಾಡಲು ಹಲವರು ಕೊಟ್ಟಿರುವ ಕಟ್ಟಿಗೆ ಎಲ್ಲವೂ ಬೆಂಕಿ ಪಾಲಾಯಿತು. ಇಂಡಸ್ಟ್ರೀಜನಲ್ಲಿ ಯೂಸೂಫ್ ಹೊಸಕೊಪ್ಪ(ಸಾಗರ) ಕಣ್ಣಿರು ಹಾಕಿದ್ದಾರೆ. ಅಗ್ನಿಶಾಮಕ ದಳ ಬಂದು ಬೆಂಕಿ ನಂದಿಸುವ ಹೊತ್ತಿಗೆ ಇಂಡಸ್ಟ್ರೀಜ್ ನಲ್ಲಿದ್ದ ಕಟ್ಟಿಗೆ ಹಾಗೂ ಮಶಿನಗಳು ಉರಿದು ಬೂದಿಯಾಗಿದೆ ಎಂದು ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟೀನೀಡಿ ಪರೀಶೀಲಿಸಿದ್ದಾರೆ. ವಾರ್ಡನ್ ಮೊಹಮ್ಮದಗೌಸ ಮಕಾನದಾರ ಭೇಟೀನೀಡಿ ಯೂಸೂಫ್ ಹೊಸಕೊಪ್ಪಗೆ ಧೈರ್ಯ ತುಂಬಿದ್ದಾರೆ.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 