ಕೊನೆಗೂ ಇಂಡಿ ನಗರಕ್ಕೆ ಹೊಸ ಅಗ್ನಿಶಾಮಕ ವಾಹನ
Finally, a new fire truck for Indy City
ಇಂಡಿ 02: ಲೋಕದರ್ಶನ ದಿನ ಪತ್ರಿಕೆ ಬೀಗ್ ಇಂಪ್ಯಾಕ್ಟ್ ನಿಂದ ಎಚ್ಚೆತ್ತ ಇಂಡಿ ಶಾಸಕರಾದ ಯಶವಂತರಾಯಗೌಡ ಪಾಟೀಲ ಅವರು ಇಂಡಿ ನಗರದಲ್ಲಿ ಇರುವ ಅಗ್ನಿಶಾಮಕ ಠಾಣೆಗೆ ಹೊಸ ಅಗ್ನಿಶಾಮಕ ವಾಹನ ಲೋಕಾರೆ್ಣ ಮಾಡಿದರು.ಇದೇ ದಿನಾಂಕ 05-12-2025 ರಂದು ಲೋಕದರ್ಶನ ದಿನ ಪತ್ರಿಕೆಯಲ್ಲಿ ಇಂಡಿ ಹಾಗೂ ಚಡಚಣ ತಾಲೂಕಿಗೆ ಇರುವುದು ಒಂದೇ ಅಗ್ನಿಶಾಮಕ ವಾಹನ ಎಂದು ಸುದ್ದಿ ಮಾಡಿ ಸರ್ಕಾರದ ಹಾಗೂ ಶಾಸಕರ ಗಮನ ಸೆಳೆಯುವ ಕೆಲಸ ಮಾಡಿತ್ತು.ಕೊನೆಗೂ ಇಂಡಿ ಶಾಸಕರಾದ ಯಶವಂತರಾಯಗೌಡ ಪಾಟೀಲ ಸಂಬಂಧಿಸಿದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು ಇಂಡಿ ತಾಲೂಕು ಇರುವ ಅಗ್ನಿಶಾಮಕ ಇಲಾಖೆಗೆ ಹೊಸ ಅಗ್ನಿಶಾಮಕ ವಾಹನ ನೀಡುವಲ್ಲಿ ಯಶಸ್ವಿಯಾಗಿದ್ದಾರೆ.ಇದರಿಂದ ಇಂಡಿ ತಾಲ್ಲೂಕಿನಲ್ಲಿ ಏಕ ಕಾಲಕ್ಕೆ ಎರಡು ಬೆಂಕಿ ಅವಘಡ ಸಂಭವಿಸಿದರೆ ಎರಡು ಕಡೆ ಹೋಗಿ ಬೆಂಕಿ ನಂದಿಸಲು ಸಾಧ್ಯ ಆಗಬಹುದು ಎಂದು ಇಂಡಿ ಅಗ್ನಿಶಾಮಕ ಇಲಾಖೆ ಸಿಬ್ಬಂದಿ ವರ್ಗ ಹರ್ಷ ವ್ಯಕ್ತಪಡಿಸಿದ್ದಾರೆ.
1) ಇಂಡಿ ಹಾಗೂ ಚಡಚಣ ತಾಲೂಕುಗೆ ಇರುವುದು ಒಂದೇ ಅಗ್ನಿಶಾಮಕ ವಾಹನ ಇತ್ತು, ಆದರೆ ಏಕ ಕಾಲದಲ್ಲಿ ಎರಡು ಕಡೆ ಬೆಂಕಿ ಅವಘಡ ಸಂಭವಿಸಿದರೆ ಹೇಗೆ ನಿಭಾಯಿಸಬೇಕು ಎಂಬುದು ದೊಡ್ಡ ಸಮಸ್ಯೆ ಆಗಿತ್ತು. ಈ ಕುರಿತು ಲೋಕದರ್ಶನ ದಿನ ಪತ್ರಿಕೆಯಲ್ಲಿ ಸುದ್ದಿ ಕೂಡಾ ಪ್ರಕಟ ಆಗಿತ್ತು. ಶಾಸಕರು ಪ್ರಾಮಾಣಿಕವಾಗಿ ಪ್ರಯತ್ನ ಮಾಡಿ ನಮಗೆ ಹೊಸ ಅಗ್ನಿಶಾಮಕ ವಾಹನ ನೀಡಿದ್ದು ಸಂತಸ ತಂದಿದೆ.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 