ಕಂಠಪೂರ್ತಿ ಕುಡಿದು ಬಂದು ಮಗನನ್ನೇ ಹತ್ಯೆ ಗೈದ ತಂದೆ : ಬಂಧನ
Father who killed his son while drunk: Arrested
ಲೋಕದರ್ಶನ ವರದಿ
ಹೂವಿನಹಡಗಲಿ 6: ಕುಡಿತಕ್ಕೆ ದಾಸ ನಾಗಿದ್ದ ತಂದೆಯೇ ಮಗನನ್ನು ಕೊಡಲೆಯಿಂದ ಕಡಿದು ಬರ್ಬರವಾಗಿ ಕೊಲೆ ಮಾಡಿ,ಪ್ಲಾಸ್ಟಿಕ್ ಚೀಲದಲ್ಲಿ ತುಂಬಿ ಎಸೆದಿರುವ ಘಟನೆ ತಾಲ್ಲೂಕಿನ ಬೀರಬ್ಬಿ ಗ್ರಾಮದಲ್ಲಿ ಸಂಭವಿದೆ.ಕುರಿಗಾಯಿ ಬೀರೇಶ (25)ಕೊಲೆಯಾದ ಯುವಕನ ಪ್ರಕರಣ ಬಗ್ಗೆ ಬೇಧಿಸಿರುವ ಪೊಲೀಸರು ಗುರುವಾರ ತಂದೆ ಲಕ್ಷ್ಮಪ್ಪ (55) ಆರೋಪಿಯನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದರು.ಫೆ.11ರಂದು ರಾತ್ರಿ ಕಂಠ ಪೂರ್ತಿ ಕುಡಿದು ಮನೆಗೆ ಬಂದ ಆರೋಪಿ, ನಿದ್ರೆಯಲ್ಲಿದ್ದ ಮಗನ ಮೇಲೆ ಕೊಡಲಿಯಿಂದ ದಾಳಿ ನಡೆಸಿ ಕೊಲೆ ಮಾಡಿ, ಮೃತದೇಹವನ್ನು ತುಂಡಾಗಿ ಕತ್ತರಿಸಿ ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿ ತಿಪ್ಪೆಗೆ ಎಸೆದಿದ್ದ. ಮಗ ಕಾಣದಿದ್ದ ಬಗ್ಗೆ ತಾಯಿ ಲಕ್ಕವ್ವ ಫೆ. 13ರಂದು ಸ್ಥಳೀಯ ಠಾಣೆಗೆ ದೂರು ನೀಡಿದ್ದರು.
ತಿಪ್ಪೆಯಲ್ಲಿದ್ದ ಪ್ಲಾಸ್ಟಿಕ್ ಚೀಲದಲ್ಲಿ ದುರ್ನಾತ ಬಂದಿದ್ದರಿಂದ ಗ್ರಾಮಸ್ಥರು ಪರೀಶೀಲಿಸಿದಾಗ ಬೀರೇಶ ಶವ ಪತ್ತೆಯಾಗಿದೆ. ಮಾಹಿತಿ ಮೇರೆಗೆ ಜಿಲ್ಲಾಪೊಲೀಸ್ ವರಿಷ್ಠಾಧಿಕಾರಿ ಎಸ್. ಜಾಹ್ನವಿ, ಡಿವೈಎಸ್ಪಿ ಸಂತೋಷ ಚವ್ಹಾಣ, ಸಿಪಿಐ ಮಲ್ಲಪ್ಪ ಹೂಗಾರ್, ಪಿಎಸ್ಐ ಭರತ್ ಪ್ರಕಾಶ್ ಸ್ಥಳಕ್ಕೆ ಭೇಟಿ ನೀಡಿ ಪರೀಶೀಲಿಸಿದ್ದರು.’ಲಕ್ಷ್ಮಪ್ಪ ಮದ್ಯ ಸೇವಿಸಿ ಮನೆಗೆ ಬರುವುದನ್ನು ಮಗ ಬೀರೇಶ್ ವಿರೋಧಿ ಸುತ್ತಿದ್ದ. ಇದರಿಂದ ಸಿಟ್ಟಾದ ಲಕ್ಷ್ಮಪ್ಪ, ಪತ್ನಿ ಊರಿಗೆ ಹೋದ ಸಮಯದಲ್ಲಿ ಮಗನನ್ನು ಕೊಲೆ ಮಾಡಿದ್ದಾನೆ’ ಎಂದು ಪೊಲೀಸರು ತಿಳಿಸಿದ್ದಾರೆ.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 