ರೈತರಿಗೆ ತಕ್ಕ ಪರಿಹಾರ ನೀಡಬೇಕು: ಶ್ರೀಕಾಂತ ದುಂಡಿಗೌಡ್ರ
Farmers should be compensated: Srikanta Dundigowdra
ರೈತರಿಗೆ ತಕ್ಕ ಪರಿಹಾರ ನೀಡಬೇಕು: ಶ್ರೀಕಾಂತ ದುಂಡಿಗೌಡ್ರ
ಶಿಗ್ಗಾವಿ 26 : ಬೆವರು ಹರಿಸಿ ಹೊಲದಲ್ಲಿ ಬೆಳೆದು ಸಾವಿರಾರು ರೂಪಾಯಿಯನ್ನು ಕರ್ಚು ಮಾಡಿ ಇನ್ನೇನು ದುಡಿದ ಶ್ರಮಕ್ಕೆ ಫಲವನ್ನು ಪಡಿಯಬೇಕು ಎಂಬ ಸಮಯದಲ್ಲಿ ಹೊಲದಲ್ಲಿ ಮಶಿನಿಗೆ ಹಾಕಿ ಕಾಳನ್ನು ತೆಗೆಯಲು ತಯಾರಾದ ಗೋವಿನಜೋಳದ ರಾಶಿಗೆ ಬೆಂಕಿ ಹಚ್ಚಿ ನಾಶಮಾಡಿರುವುದು ಖಂಡನೀಯ ಎಂದು ಭಾರತ ಸೇವಾ ಸಂಸ್ಥೆ ಅಧ್ಯಕ್ಷ ಶ್ರೀಕಾಂತ ದುಂಡಿಗೌಡ್ರ ಹೇಳಿದರು. ತಾಲೂಕಿನ ಮುಗಳಿ ಗ್ರಾಮದ ರೈತ ಮಹದೇವಪ್ಪ ತಳವಾರ ಹೊಲದಲ್ಲಿ ಸುಮಾರು 5 ಲಕ್ಷ ರೂಪಾಯಿಯ ಗೋವಿನ ಜೋಳದ ರಾಶಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿ ಸುಟ್ಟಿರುವ ಅವರ ಮನೆಗೆ ತೆರಳಿ ಧೈರ್ಯವನ್ನು ಹೇಳಿ ಮಾತನಾಡಿದ ಅವರು ಈ ಒಂದು ಘಟನೆಯನ್ನು ಪೊಲೀಸ್ ಇಲಾಖೆ ಹಾಗೂ ತಾಲೂಕ ಆಡಳಿತ ಹೆಚ್ಚಿನ ಆಸಕ್ತಿ ತೆಗೆದುಕೊಂಡು ರೈತನಿಗೆ ತಕ್ಕ ಪರಿಹಾರವನ್ನು ದೊರಕಿಸಬೇಕು ಮತ್ತು ದುಷ್ಕರ್ಮಿಗಳಿಗೆ ಕಠಿಣ ಶಿಕ್ಷೆಯನ್ನು ನೀಡಿ ಇಂತಹ ಘಟನೆಗಳು ಮರುಕಳಿಸದಂತೆ ಶಿಕ್ಷಿಸಬೇಕು ಎಂದು ಆಗ್ರಹಿಸಿದರು. ಈ ಸಂದರ್ಭದಲ್ಲಿಗ್ರಾಮ ಪಂಚಾಯತಿ ಸದಸ್ಯರಾದ ಶಿವನಾನಂದ ಬಿಶೆಟ್ಟಿಶಂಕರ ಗೊಬ್ಬಿ, ನಾಗೇಶ ಅಣ್ಣಿಗೇರಿಯಲ್ಲಪ್ಪ ಹುಕ್ಕೇರಿ ,ನಿಂಗಪ್ಪ ದುಂಡಪ್ಪನವರ, ಈಶ್ವರಗೌಡ ಪಾಟೀಲ ಹಾಗೂ ಗ್ರಾಮದ ರೈತರು ಇದ್ದರು.
ಬೆಳಗಾವಿಯ ನಡುರಸ್ತೆಯಲ್ಲಿ ಹೊತ್ತಿ ಉರಿದ ಕಾರು : ತಡರಾತ್ರಿ ಘಟನೆಯಿಂದ ಬೆಚ್ವಿಬಿದ್ದ ಜನ
ಸಮೃದ್ಧಿ ಎಕ್ಸ್ಪ್ರೆಸ್ವೇಯಲ್ಲಿ ನಿಂತಿದ್ದ ಟ್ರಕ್ಗೆ ಕಾರು ಡಿಕ್ಕಿ ಹೊಡೆದು ಒಂದೇ ಕುಟುಂಬದ ಐವರು ಮೃತ
ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ : ಜಿಲ್ಲೆಯ ಬಿಜೆಪಿ ಶಾಸಕನ ಹೆಸರು ತಳಕು, ಚರ್ಚೆ ಶುರು
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ 