ಸರಿಯಾಗಿ ವಿದ್ಯುತ್ ಸರಬುರಾಜು ಮಾಡುವಂತೆ ರೈತರಿಂದ ಆಗ್ರಹ
Farmers demand proper electricity supply
ವಿಜಯಪುರ 01 : ತಾಲೂಕಿನ ಬೊಮ್ಮನಹಳ್ಳಿ, ಗುಣಕಿ, ಮಿಂಚನಾಳ, ಡೋಮನಾಳ, ಕನ್ನಾಳ ಗ್ರಾಮದ ರೈತರಿಗೆ ವಿದ್ಯುತ್ ಕಣ್ಣಾಮುಚ್ಚಾಲೆಯಿಂದ ಸಾಕಾಗಿದೆ, 2 ವರ್ಷಗಳ ಹಿಂದೆ ಕನ್ನೂರಿನಲ್ಲಿ ಉದ್ಘಾಟನೆ ಆಗಬೇಕಿರುವ 110 ಕೆ.ವಿ ಕೆ.ಇ.ಬಿ ಇನ್ನು ಉದ್ಘಾಟನೆ ಮಾಡದೇ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ನಿರ್ಲಕ್ಷ್ಯದಿಂದ ಈ ಬಾಗದ ಸಾರ್ಚಜನಿಕರಿಗೆ, ರೈತರಿಗೆ , ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳಿಗೆ ಸಾಕಷ್ಟು ತೊಂದರೆಯಾಗುತ್ತಿದೆ.
ಕನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ವಿಜಯಪುರದ ಗ್ರಾಮೀಣವಲಯದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಿಗೆ ಮನವಿ ಸಲ್ಲಿಸಿ ಶೀಘ್ರದಲ್ಲಿ ಕನ್ನೂರಿನಲ್ಲಿಯ ಹೊಸ ಕೆ.ಇ.ಬಿ ಉದ್ಘಾಟನೆ ಮಾಡಿ ರೈತರ ಜಮೀನುಗಳಿಗೆ 7 ಘಂಟೆ ತ್ರೀಫೇಸ್ ವಿದ್ಯುತ್ ಮತ್ತು ತೋಟದ ಮನೆಗಳಿಗೆ ರಾತ್ರಿ ಸಿಂಗಲ್ ಫೇಸ್ ವಿದ್ಯುತ್ ವಿತರಣೆ ಮಾಡಬೇಕು. ಈಗ ಪರೀಕ್ಷೇ ಸಮಯವಿರುವುದರಿಂದ ವಿದ್ಯುತ್ ವಿತರಣೆಯಲ್ಲಿ ಚೆಲ್ಲಾಟ ಮಾಡಬಾರದು ಎಂದು ಆಗ್ರಹಿಸಲಾಯಿತು.
ಕೂಡಲೇ ಈ ವಿಷಯವನ್ನು ಗಂಭಿರವೆಂದು ಪರಿಗಣಿಸಿ ಕನ್ನೂರಿನಲ್ಲಿ ಕೆ.ಇ.ಬಿ ಉದ್ಘಾಟನೆ ಮಾಡಬೇಕು, ಇಲ್ಲವಾದಲ್ಲಿ ಮಾರ್ಚ 5 ರಂದು ಸುತ್ತಮುತ್ತಲಿನ ನೂರಾರು ರೈತರೊಂದಿಗೆ ಉಗ್ರವಾದ ಹೋರಾಟ ಮಾಡಲಾಗುವುದು ಎಂದು ಮನವಿ ಸಲ್ಲಿಸ ಎಚ್ಚ್ರಿಕೆ ನೀಡಲಾಯಿತು.
ಇ ವೇಳೆ ವಿಜಯಪುರ ತಾಲೂಕಾ ಉಪಾರ್ಧಯಕ್ಷರಾದ ಸತೀಶ ದಾಶ್ಯಾಳ, ಮಾಂತಗೌಡ ಬಿರಾದಾರ, ರಾಮನಗೌಡ ಬಿರಾದಾರ, ವಿರೇಶ ಮುರಗುಂಡಿ, ಶ್ತೀನಾಥ ದಾಶ್ಯಾಳ, ಕಾಂತು ಗಾಡವೆ, ಸಿದ್ದರಾಮ ದಾಶ್ಯಾಳ, ಅಶೋಕಗೌಡ ಬಿರಾದಾರ, ಗುರಣ್ಣಗೌಡ ಪಾಟೀಲ, ಗಿರಿಮಲ್ಲ ಕೋನಳ್ಳಿ, ಯಶ್ವಂತ ಬಡಿಗೇರ, ಗುರುಶಾಂತ ಬಬಲೇಶ್ವರ, ದಯವಂತರಾಯ ರೇವಶೆಟ್ಟಿ ಸೇರಿದಂತೆ ಇತರರು ಇದ್ದರು.
ಬೆಳಗಾವಿಯ ನಡುರಸ್ತೆಯಲ್ಲಿ ಹೊತ್ತಿ ಉರಿದ ಕಾರು : ತಡರಾತ್ರಿ ಘಟನೆಯಿಂದ ಬೆಚ್ವಿಬಿದ್ದ ಜನ
ಸಮೃದ್ಧಿ ಎಕ್ಸ್ಪ್ರೆಸ್ವೇಯಲ್ಲಿ ನಿಂತಿದ್ದ ಟ್ರಕ್ಗೆ ಕಾರು ಡಿಕ್ಕಿ ಹೊಡೆದು ಒಂದೇ ಕುಟುಂಬದ ಐವರು ಮೃತ
ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ : ಜಿಲ್ಲೆಯ ಬಿಜೆಪಿ ಶಾಸಕನ ಹೆಸರು ತಳಕು, ಚರ್ಚೆ ಶುರು
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ 