ಫೆ.9ರಂದು ರೈತರ ನಡೆ ಆಲಮಟ್ಟಿ ಜಲಾಶಯದ ಕಡೆ ಕಾರ್ಯಕ್ರಮ

ಫೆ.9ರಂದು ರೈತರ ನಡೆ ಆಲಮಟ್ಟಿ ಜಲಾಶಯದ ಕಡೆ ಕಾರ್ಯಕ್ರಮ  Farmers' march towards Almatti reservoir on Feb. 9


          ಸಿಂದಗಿ  07: ನಗರದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತ ಸೇನೆ ವತಿಯಿಂದ ಹಮ್ಮಿಕೊಂಡ ಪತ್ರಿಕಾಗೋಷ್ಠಿಯಲ್ಲಿ ರೈತ ಮುಖಂಡ ನಿಂಗರಾಜ ಅತನೂರ ಮಾತನಾಡಿದರು. 

         ಸಿಂದಗಿ:ಕೃಷ್ಣ ನ್ಯಾಯಾಧೀಕರಣ ತೀರ​‍್ು ಜಾರಿಗೊಳಿಸಿ ಕೃಷ್ಣ ಮೇಲ್ದಂಡೆ 3ನೆಯ ಹಂತದ ಯೋಜನೆ ಜಾರಿಗೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘಹಾಗೂ ರೈತ ಸೇನೆಯಿಂದ ಫೆ.9ರಂದು ರೈತರ ನಡೆ ಆಲಮಟ್ಟಿ ಜಲಾಶಯದ ಕಡೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ರೈತ ಮುಖಂಡ ನಿಂಗರಾಜ ಅತನೂರ ಹೇಳಿದರು. 

ಸಿಂದಗಿ ನಗರದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡ ಪತ್ರಿಕಾಗೋಷ್ಠಿಯನ್ನು ಉದ್ದೇಶಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಕೃಷ್ಣ ನ್ಯಾಯಾಧೀಕರಣದ ತೀರ​‍್ು ಜಾರಿಗೆ ಕಾನೂನಾತ್ಮಕ ಸಮಸ್ಯೆ ಪರಿಹರಿಸಿ ಅಧಿಕೃತ ಅಧಿಸೂಚನೆ ಹೊರಡಿಸಬೇಕು. ಕೃಷ್ಣ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯಾಗಿ ಘೋಷಿಸಿ ಅಗತ್ಯ ಅನುದಾನವನ್ನು ಒದಗಿಸಬೇಕು. ಅಲಮಟ್ಟಿ ಜಲಾಶಯ ಎತ್ತರ ಕಾಮಗಾರಿ ಬಾಕಿ ಉಳಿದಿದೆ.

        ಕೂಡಲೇ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಮನ್ವಯತೆಯಿಂದ ಯೋಜನೆ ಜಾರಿಗೆ ಮುಂದಾಗಬೇಕೆಂದು ಆಗ್ರಹಿಸಿ ನಡೆಯಲಿರುವ ಹೋರಾಟದಲ್ಲಿ ಮಠಾಧೀಶರು, ವಿವಿಧ ರೈತ ಸಂಘಟನೆಗಳು, ರೈತರು ಸೇರಿದಂತೆ ಎಲ್ಲರು ಬೆಂಬಲಿಸಿ ಭಾಗವಹಿಸುವಂತೆ ಮನವಿ ಮಾಡಿದರು.ಉತ್ತರ ಕರ್ನಾಟಕದ ರೈತರ ಹಿತದೃಷ್ಟಿಯಿಂದ ಈ ಹೋರಾಟವನ್ನು ಆಯೋಜಿಸಲಾಗಿದ್ದು, ವಿವಿಧ ಜಿಲ್ಲೆಗಳ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪಾಲ್ಗೊಳ್ಳುವಂತೆ ಮನವಿ.

        ಸರ್ಕಾರದ ಇಚ್ಛಾಶಕ್ತಿ ಕೊರತೆಯಿಂದಾಗಿ ಕೊನೆ ಭಾಗದ ರೈತರಿಗೆ ಪ್ರತಿವರ್ಷ ನೀರು ಸಿಗದೆ ಭೂಮಿ ಬರಡಾಗುತ್ತಿದೆ. ಎರಡನೇ ಬೆಳೆಗೆ ನೀರು ಒದಗಿಸುವಂತೆ ಹೋರಾಟ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸರ್ಕಾರ ತಕ್ಷಣ ಕಾರ್ಯಪ್ರವೃತ್ತರಾಗಿ ಸುಪ್ರೀಂ ಕೋರ್ಟ್‌ನಲ್ಲಿರುವ ಪ್ರಕರಣ ಇತ್ಯರ್ಥಗೊಳಿಸಿ ಜಲಾಶಯ ಎತ್ತರ ಹೆಚ್ಚಳಕ್ಕೆ ಮುಂದಾಗಬೇಕು ಎಂದು ಆಗ್ರಹಿಸಿದ್ದಾರೆ. 

ಈ ವೇಳೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತ ಸೇನೆ ವತಿಯಿಂದ ಫೆ.9ರಂದು ರೈತರ ನಡೆ ಆಲಮಟ್ಟಿ ಜಲಾಶಯದ ಕಡೆ ಕಾರ್ಯಕ್ರಮ ಜರಗುತ್ತಿರುವ ವಾಲ್ ಪೋಸ್ಟ್‌ರಗಳನ್ನು ಬಿಡುಗಡೆಗೊಳಿಸಲಾಯಿತು. ಇದೇ ಸಂದರ್ಭದಲ್ಲಿ ರೈತ ಸಂಘ ತಾಲೂಕಾಧ್ಯಕ್ಷ ಬಸವರಾಜ ರಂಜುಣಗಿ, ಗೌರವಾಧ್ಯಕ್ಷ ಏಕನಾಥ ದ್ವಾಶ್ಯಾಳ, ರಮೇಶ ಗುನ್ನಾಪೂರ, ಜೆಟ್ಟೆಪ್ಪ ಶಂಬೇವಾಡ, ಪರಸು ದೊಡಮನಿ, ರಾಜು ಬಡಿಗೇರ, ಶಾಂತಪ್ಪ ಕೋರವಾರ, ಮುಖೇಶ ಬಡಿಗೇರ, ದ್ಯಾವಪ್ಪಗೌಡ, ರಮೇಶ ಬಡಿಗೇರ ಸೇರಿದಂತೆ ಅನೇಕರು ಇದ್ದರು.