ಬೀಳ್ಕೊಡುಗೆ-ಸ್ವಾಗತ ಸಮಾರಂಭ

ಬೀಳ್ಕೊಡುಗೆ-ಸ್ವಾಗತ ಸಮಾರಂಭ Farewell-welcome ceremony

             ಬೆಳಗಾವಿ, 15 : ನಗರದ ಕೆಎಲ್‌ಇ  ಸಂಸ್ಥೆಯ ಬಿ ಎಸ್ ಜೀರಿಗೆ ಸಭಾಭವನದಲ್ಲಿ  ನಿಕಟಪೂರ್ವ ಎಸ್ ಪಿ ಅವರಿಗೆ ಹಾಗೂ ನೂತನವಾಗಿ ಆಗಮಿಸಿರುವ  ಎಸ್ ಪಿ ಅವರಿಗೆ  ಹೃದಯಸ್ಪರ್ಸಿ ಬೀಳ್ಕೊಡುಗೆ  ನಿಕಟ ಪೂರ್ವ ಜಿಲ್ಲಾ ಪೊಲೀಸ್ ವರಿಷ್ಠ ಅಧಿಕಾರಿ ಡಾ. ಭೀಮಾಶಂಕರ್ ಗುಳೇದ ಅವರು ಪದೋನ್ನತಿ ಹೊಂದಿ ಬೆಂಗಳೂರಿಗೆ ವರ್ಗಾವಣೆಯಾದ ಸಲುವಾಗಿ ಅವರಿಗೆ ಬಿಳ್ಕೊಡುಗೆ ಹಾಗೂ ನೂತನ ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಕೆ. ರಾಮರಾಜನ್ ಅವರಿಗೆ ಸ್ವಾಗತ ಸಮಾರಂಭದಲ್ಲಿ  ಕನ್ನಡ ರಕ್ಷಣಾ ವೇದಿಕೆ ಪದಾಧಿಕಾರಿಗಳು ಸಮಾರಂಭದಲ್ಲಿ ಪಾಲ್ಗೊಂಡು ಡಾ. ಭೀಮಾಶಂಕರ್ ಗುಳೇದ್ ಬೀಳ್ಕೊಡುಗೆ ಹಾಗೂ ಕೆ.ರಾಮರಾಜನ್ ಅವರಿಗೆ ಸ್ವಾಗತ ಮಾಡಿ ಸತ್ಕರಿಸಿ ಸನ್ಮಾನ ಸ್ವಾಗತ ಮಾಡಲಾಯಿತು.ಈ ಸಂದರ್ಭದಲ್ಲಿ ಕನ್ನಡ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರಾದ ಡಾ.ಕೆಂಪಣ್ಣ ಚೌಕಶಿ ,ಉತ್ತರ ಕರ್ನಾಟಕ ರಾಜ್ಯಾಧ್ಯಕ್ಷರಾದ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಅಧ್ಯಕ್ಷರಾದ ಬಸವರಾಜ್ (ಅಜ್ಜು) ಪಂಜಾನಟ್ಟಿ, ಬೆಳಗಾವಿ ಜಿಲ್ಲಾ ಯುವ ಘಟಕದ ಅಧ್ಯಕ್ಷರಾದ ಶಶಿಧರ್ ಚೌಕಶಿ, ಕಾರ್ಯದರ್ಶಿಯಾದ ಪ್ರವೀಣ್ ನಾವಿ, ಕಾರ್ಯಕರ್ತರಾದ ಹನುಮಂತ ಚೌಕಶಿ, ಮಲ್ಲಿಕಾರ್ಜುನ ಅರಭಾವಿ, ಕಾಶಪ್ಪ ನಿಂಗಣ್ಣವರ, ವಿವೇಕ್ ಕತ್ತಿ, ಸಿದ್ದಪ್ಪ ತಳಗೇರಿ, ಉಪಸ್ಥಿತರಿದ್ದರು.