ಸಾಕಷ್ಟು ಅಭಿವೃದ್ಧಿ ಕಾರ್ಯದೊಂದಿಗೆ ಒದಗಿಸಿದ ಸೌಲಭ್ಯ : ಶಾಸಕ ಜೆ.ಎನ್‌.ಗಣೇಶ

ಸಾಕಷ್ಟು ಅಭಿವೃದ್ಧಿ ಕಾರ್ಯದೊಂದಿಗೆ ಒದಗಿಸಿದ ಸೌಲಭ್ಯ : ಶಾಸಕ ಜೆ.ಎನ್‌.ಗಣೇಶ  Facilities provided with adequate development work: MLA J.N. Ganesh

ಲೋಕದರ್ಶನ ವರದಿ 

ಕಂಪ್ಲಿ  07: ತಾಲೂಕಿನ ಗ್ರಾಮೀಣ ಭಾಗದಲ್ಲಿ ಸುಮಾರು 6.20 ಕೋಟಿ ವೆಚ್ಚದಲ್ಲಿ ಸಿಸಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಜೆ.ಎನ್‌.ಗಣೇಶ ಮಂಗಳವಾರ ಭೂಮಿ ಪೂಜೆ ಸಲ್ಲಿಸಿದರು. ನಂತರ ಶಾಸಕ ಗಣೇಶ ಮಾತನಾಡಿ, ಸಾಕಷ್ಟು ಅಭಿವೃದ್ಧಿ ಕಾರ್ಯಗಳೊಂದಿಗೆ ಜನತೆಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುತ್ತಿದೆ. ಇಂದಿನ ದಿನಮಾನದಲ್ಲಿ ಶಿಕ್ಷಣಕ್ಕೆ ಅತಿ ಹೆಚ್ಚು ಒತ್ತು ನೀಡಿದರೆ, ಮಕ್ಕಳ ಭವಿಷ್ಯ ಉಜ್ವಲವಾಗಲಿದೆ ಎಂದು ಅಭಿಮತ ವ್ಯಕ್ತಪಡಿಸಿದರು.  ತಾಲೂಕಿನ ದೇವಲಾಪುರ ಗ್ರಾಮದ ಸೋಮಲಾಪುರ ಗ್ರಾಮದಲ್ಲಿ 2025-26ನೇ ಸಾಲಿನ 4059 ಸಿಎಂಡಿಕ್ಯೂ ಯೋಜನೆಯಡಿ ಸುಮಾರು 300 ಲಕ್ಷ ಹಾಗೂ ಸುಗ್ಗೇನಹಳ್ಳಿ ಗ್ರಾಪಂಯ ಮಾವಿನಹಳ್ಳಿ ಗ್ರಾಮದಲ್ಲಿ ಸುಮಾರು 320 ಲಕ್ಷ ವೆಚ್ಚದಲ್ಲಿ ನಿರ್ಮಿಸಲಿರುವ ಸಿಸಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದರು. ಈ ಸಂದರ್ಭದಲ್ಲಿ ಗ್ಯಾರಂಟಿ ಯೋಜನೆಯ ತಾಲೂಕು ಸಮಿತಿ ಅಧ್ಯಕ್ಷ  ಕೆ.ಶ್ರೀನಿವಾಸರಾವ್, ಮುಖಂಡರಾದ ವಿ.ಮಾರೇಶ, ಚಂದುಸಾಬ್, ಆರ್‌.ಬಸವರಾಜ, ರಾಮರಾಜು, ವಡ್ಡಿನ ಮರಿಸ್ವಾಮಿ, ನಾಯಕರ ಪಂಪಣ್ಣ, ಬಾಬುಸಾಬ್, ಬಸಯ್ಯಸ್ವಾಮಿ, ಪಂಪಣ್ಣ, ಎನ್‌.ರಮೇಶ, ಹಾಗೂ ಸೋಮಲಾಪುರದ ವಿ.ರಮೇಶ, ವಿರುಪಣ್ಣ, ಉಮೇಶಪ್ಪ, ತಿಮ್ಮಲಾಪುರ ಬಸವರಾಜ, ಎಂ.ಗೋಪಾಲಪ್ಪ, ರಾಮಪ್ಪ, ಎಂ.ಮಂಜಪ್ಪ, ಬಿ.ಕೆ.ಸ್ವಾಮಿ, ಬಿ.ಬಸಪ್ಪ ಸೇರಿದಂತೆ ಅನೇಕರಿದ್ದರು.