ರಾಷ್ಟ್ರೀಯ ವಿಜ್ಞಾನ ದಿವಸ ನಿಮಿತ್ಯ ಪ್ರಬಂಧ ಸ್ಪರ್ಧೆ

ರಾಷ್ಟ್ರೀಯ ವಿಜ್ಞಾನ ದಿವಸ ನಿಮಿತ್ಯ ಪ್ರಬಂಧ ಸ್ಪರ್ಧೆ Essay competition on the occasion of National Science Day

ಲೋಕದರ್ಶನ ವರದಿ 

ವಿಜಯಪುರ 05 : ಮೇರಾ ಯುವ ಭಾರತ (ಮೈ ಭಾರತ) ವಿಜಯಪುರ, ಗಡಿನಾಡ ಯುವ ಸಮಾಜ ಹಾಗೂ ಗ್ರಾಮೀಣ ಶಿಕ್ಷಣ ಅಭಿವೃದ್ಧಿ ಸಂಘ ರೇವತಗಾಂವ ಸಂಯುಕ್ತಾಶ್ರಯದಲ್ಲಿ ರಾಷ್ಟ್ರೀಯ ವಿಜ್ಞಾನ ದಿವಸ ಹಿ 2026 ರ ನಿಮಿತ್ಯ ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಹಾಲಹಳ್ಳಿ ಗ್ರಾಮದ ಅಲ್ಪ ಸಂಖ್ಯಾತರ ಮುರಾರ್ಜಿ ದೇಸಾಯಿ ವಸತಿ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗಾಗಿ ಪ್ರಬಂಧ ಸ್ಪರ್ಧೆ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು 25 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರಬಂದಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಸವರಾಜಗೌಡ ಪಾಟೀಲ ವಹಿಸಿದ್ದರು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ರವಿಕೆಂಗಾರ, ಶಂಕರ ಇಂಗಳೆ, ಪ್ರಿನ್ಸಿಪಾಲ ರವಿಚಂದ್ರ ಕಾಂಬಳೆ, ಗಿಬ್ಬಳ್ಳಿ ಮೋಹನಕುಮಾರ, ಗೀರೀಶ ನಿವರಗಿ, ಬನಸೋಡೆ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.