ಪರಿಸರ ರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿ ಹಿ ಡಾ. ಗಡಾದ

ಪರಿಸರ ರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿ ಹಿ ಡಾ. ಗಡಾದ Environmental protection is everyone's responsibility, says Dr. Gadda

           ಗದಗ  08:  ಪ್ಲಾಸ್ಟಿಕ್‌ನಂತಹ ವಿಷಕಾರಿ ವಸ್ತುಗಳು ನೈಸರ್ಗಿಕ ಸಂಪನ್ಮೂಲಗಳಾದ ಮಣ್ಣು ನೀರು ಗಾಳಿ ಇವುಗಳೊಂದಿಗೆ ಬೆರೆಯುವುದರಿಂದ ಮತ್ತು ಇನ್ನಿತರ ಹಾನಿಕಾರಕ ಪದಾರ್ಥಗಳು ಪರಿಸರದೊಂದಿಗೆ ಬೆರೆತು  ಜೀವಿಗಳ ಆರೋಗ್ಯಕ್ಕೆ ಸಂಚಕಾರವನ್ನು ಉಂಟು ಮಾಡಿ  ಮಾರಣಾಂತಿಕ ಕಾಯಿಲೆಗಳಿಗೆ ನೂಕುತ್ತಿವೆ ಆದ್ದರಿಂದ ಪ್ರತಿಯೊಬ್ಬರೂ ಪರಿಸರವನ್ನು  ಜವಾಬ್ದಾರಿಯಿಂದ  ರಕ್ಷಣೆ ಮಾಡಬೇಕು ಎಂದು ತಾಲೂಕ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಡಾ. ರಾಜೇಂದ್ರ ಎಸ್ ಗಡಾದ ಅವರು ಹೇಳಿದರು.   

            ಈ ಕಾರ್ಯಕ್ರಮದ ವೇದಿಕೆಯಲ್ಲಿ ತಾಲೂಕ ಆರೋಗ್ಯ ಅಧಿಕಾರಿಗಳ ಕಾರ್ಯಾಲಯದ ಶ್ರೀಮತಿ ಸುಧಾ ಬೆಂತೂರ, ಗುಡದಪ್ಪ ಜಗ್ಗಿನ ಭೂದೇಶ್ ಸಿದ್ದನಗೌಡರ ಆಸೀನರಾಗಿದ್ದರು. ಆರಂಭದಲ್ಲಿ ನಿರ್ಮಲ ಮರಿಗೌಡ ಪ್ರಾರ್ಥಿಸಿದರು ಲೀಲಾವತಿ ಚಲವಾದಿ ಸ್ವಾಗತಿಸಿದರು. ಬಿಎಸ್ ಸಿದ್ದನಗೌಡ ಕಾರ್ಯಕ್ರಮ ರೂಪಿಸಿದರು ಕೊನೆಯಲ್ಲಿ  ಮೌಲಾನ  ಸಿದ್ದಿ ವಂದಿಸಿದರು. ಈ ಕಾರ್ಯಕ್ರಮದಲ್ಲಿ ತಾಲೂಕಿನ ವಿವಿಧ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ವರ್ಗದವರು ಆಶಾ ಕಾರ್ಯಕರ್ತೆಯರು ಸಾರ್ವಜನಿಕರು ವಿದ್ಯಾರ್ಥಿಗಳು ಮಕ್ಕಳು ಮತ್ತು ರೋಗಿಗಳು ಪಾಲಕರು ಪಾಲ್ಗೊಂಡಿದ್ದರು.