ಕೌಶಲ್ಯ ಅಭಿವೃದ್ಧಿಯ ಮೂಲಕ ಮಹಿಳೆಯರನ್ನು ಸಬಲೀಕರಣಗೊಳಿಸುವುದು
ಕೊಪ್ಪಳ 04: ಸರ್ವೋದಯ ಸಮಗ್ರ ಗ್ರಾಮೀಣ ಅಭಿವೃದ್ಧಿ ಸಂಸ್ಥೆ, ಕೊಪ್ಪಳ ಹಾಗೂ, ಉಷಾ ಇಂಟರ್ನ್ಯಾಷನಲ್ ಕಂಪನಿ ಲಿಮಿಟೆಡ್ ಇವರ ಸಹಯೋಗದೊಂದಿಗೆ 9 ದಿನಗಳ ಉಚಿತ ಹೊಲಿಗೆ ತರಬೇತಿ ಕಾರ್ಯಕ್ರಮವನ್ನು ವಿಜಯನಗರ ಜಿಲ್ಲೆಯ ಮರಿಯಮ್ಮನಹಳ್ಳಿಯಲ್ಲಿ ಜನವರಿ 27 ರಿಂದ ಫೆಬ್ರವರಿ 4, 2025 ರವರೆಗೆ ನಡೆಸಿತು. ಈ ಕಾರ್ಯಕ್ರಮವು 15 ಮಹಿಳೆಯರಿಗೆ ಅವರ ಹೊಲಿಗೆ ಕೌಶಲ್ಯವನ್ನು ಹೆಚ್ಚಿಸುವ ಮತ್ತು ಆರ್ಥಿಕವಾಗಿ ಸಬಲೀಕರಿಸುವ ಗುರಿಯನ್ನು ಹೊಂದಿದ್ದು, ಭಾಗವಹಿಸಿದ ಎಲ್ಲ ಮಹಿಳೆಯರಿಗೆ ಉಷಾ ನಿಂದ ಉಚಿತ ಹೊಲಿಗೆ ಯಂತ್ರಗಳನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಉಷಾ ಕಂಪನಿಯ ಡೆಪ್ಯುಟಿ ಮ್ಯಾನೇಜರ್ ರಾಜ್ ಕುಮಾರ್, ಕೊಪ್ಪಳದ ಸರ್ವೋದಯ ಋಆಖ ನ ಅಇಓ ದೀಪಾ ಸುನಿಲ್ ಮತ್ತು ಸರ್ವೋದಯದ ಸೀನಿಯರ್ ಫೀಲ್ಡ್ ಅಸೋಸಿಯೇಟ್ ಅಕ್ಕಮ್ಮ ಕೊಟಗಿ ಉಪಸ್ಥಿತರಿದ್ದರು.