ರಾಜ್ಯ ದಲಿತ ಸಂಘರ್ಷ ಸಮಿತಿ ತಾಲೂಕಾ ಶಾಖೆ ಪದಾಧಿಕಾರಿಗಳ ಆಯ್ಕೆ
Election of office bearers of State Dalit Sangharsh Samiti Taluka Branch
ಮುದ್ದೇಬಿಹಾಳ 14 : ಪಟ್ಟಣದ ಪ್ರವಾಸಿ ಮಂದಿರದಲ್ಲಿ ದಸಸಂ ಜಿಲ್ಲಾ ಸಂಚಾಲಕ ವಾಯ್. ಸಿ. ಮಯೂರ ನೇತೃತ್ವದಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ತಾಲೂಕಾ ಶಾಖೆ ಪದಾಧಿಕಾರಿಗಳ ಆಯ್ಕೆ ನಡೆಯಿತು.ಈ ವೇಳೆ ತಾಲೂಕಾ ಡಿ. ಎಸ್. ಎಸ್. (ಡಿ. ಜಿ. ಸಾಗರ ಬಣ ) ನೂತನ ಸಂಚಾಲಕರಾಗಿ ಬಸವರಾಜ. ಸಂ. ತಂಗಡಗಿ, ಸಹ ಸಂಚಾಲಕರಾಗಿ ಪರಶು ಇಂಗಳಗೇರಿ, ತಮ್ಮಣ್ಣ ಎಸ್. ನಂದಿ, ಪರಶುರಾಮ ಚಲವಾದಿ, ಖಜಾಂಚಿಯಾಗಿ ರಾಮಣ್ಣ ಚಲವಾದಿ ಸೇರಿದಂತೆ ಹಲವು ಪದಾಧಿಕಾರಿಗಳನ್ನು ಆಯ್ಕೆ ಮಾಡುವ ಮೂಲಕ ಸಂಘಟನೆಗೆ ಚಾಲನೆ ನೀಡಸಿದರು. ಈ ವೇಳೆ ಜಿಲ್ಲಾ ಸಮಿತಿಯ ಮಹಾಂತೇಶ ಸಾಸಾಬಾಳ ಬಾಗೇವಾಡಿ, ಸಂಚಾಲಕರ ಅವಿನಾಶ ಬಾಣಿಕೋಲ, ದೇವರಹಿಪ್ಪರಗಿ ಸಂಚಾಲಕ ಸಿದ್ದಾರ್ಥ ರೋಗಿ, ಕಲಕೇರಿ ಸಂಚಾಲಕ ಯಮನೂರಿ ಬೆಕಿನಾಳ, ಕಾನೂನು ಸಲಹೆಯಗಾರ ಕೆ ಬಿ ದೊಡಮನಿ, ಬಿ ಎಸ್ ಎಸ್ ಸಂಚಾಲಕ ಸಿ ಜಿ ವಿಜಯಕರ,ಹರೀಶ ನಾಟಿಕರ, ದೇವರಾಜ ಹಂಗರಗಿ, ಸೇರಿದಂತೆ ಅನೇಕ ತಾಲೂಕಿನ ವಿವಿಧ ಗ್ರಾಮಗಳ ಡಿ ಎಸ್ ಎಸ್ ಮುಖಂಡರು ಭಾಗವಹಿಸಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 