ನೀರಿನ ಅಭಾವದಿಂದ ಹಿಂಗಾರಿ ಬೆಳೆಗೆ ಭಾರಿ ಈ ವರ್ಷವೂ ಈ ಬೆಳೆಗಳ ಇಳುವರಿಯಲ್ಲಿ ಮತ್ತಷ್ಟು ಕುಸಿತ
Due to lack of water, fall in the yield of these crops is heavy this year too
ನೀರಿನ ಅಭಾವದಿಂದ ಹಿಂಗಾರಿ ಬೆಳೆಗೆ ಭಾರಿ ಈ ವರ್ಷವೂ ಈ ಬೆಳೆಗಳ ಇಳುವರಿಯಲ್ಲಿ ಮತ್ತಷ್ಟು ಕುಸಿತ
ಸಂಬರಗಿ 07 : ಗಡಿ ಭಾಗದ ಹಲವು ಗ್ರಾಮಗಳಲ್ಲಿ ಜೋಳದ ಬೆಳೆ ಕಡಿಮೆ ಮಳೆಯಿಂದಾಗಿ ನೀರಿನ ಕೊರತೆಯಿಂದ ಬೆಳೆಗಳು .ಬತ್ತಿ ಹೋಗಿದ್ದಾವೆ ರೈತರು ಕಂಗಾಲಾಗಿದ್ದಾರೆಹಿಂಗಾರಿ ಎಲ್ಲ ಬೆಳೆ ನೀರಿನ ಕೊರತೆಯಿಂದ ಹಾಳಾಗಿ ಹೋಗಿದೆ ರೈತರಿಗೆ ಮತ್ತು ಬೀದಿಪಾಲಾಗುವ ಪರಿಸ್ಥಿತಿ ಬಂದಿದೆಗಡಿಗ್ರಾಮಗಳಲ್ಲಿ ಕೃಷಿಯು ಮಳೆಯ ನೀರಿನ ಮೇಲೆ ಅವಲಂಬಿತವಾಗಿದೆ, ಇಲ್ಲದಿದ್ದರೆ, ಮಳೆಯ ಪ್ರಮಾಣವು ಕಡಿಮೆಯಾದ ಈ ವರ್ಷಗಳಲ್ಲಿ ಬೆಳೆಗಳು ಒಣಗುತ್ತವೆ. ಬೆಳೆಯ ಬೆಳವಣಿಗೆ ಕುಂಠಿತವಾಗಿದ್ದು, ಕೊನೆಗೆ ರೈತರು ಜಾನುವಾರುಗಳಿಗೆ ಆಹಾರ ನೀಡುತ್ತಿದ್ದಾರೆ,ನೀರಿನ ಅಭಾವದಿಂದ ಹಿಂಗಾರಿ ಬೆಳೆಗೆ ಭಾರಿ ಈ ವರ್ಷವೂ ಈ ಬೆಳೆಗಳ ಇಳುವರಿಯಲ್ಲಿ ಮತ್ತಷ್ಟು ಕುಸಿತ ಉಂಟಾಗಿದ್ದು, ಬೆಳೆಗಳಿಗೆ ಬಾಧಿಸುವ ನಾನಾ ರೋಗಗಳಿಂದ ರೈತರು ಕಂಗೆಟ್ಟಿದ್ದು, ಬೆಳೆ ಉಳಿಸಲು ಬೆಲೆ ಬಾಳುವ ಓಷಧ ಸಿಂಪರಣೆ ಮಾಡಿದರೂ ಯಾವುದೇ ಪರಿಣಾಮ ಬೀರಿಲ ಗಡಿ ಭಾಗದ ಅನಂತಪುರ ಹೋಬಳಿಯ ಬರುವ ಮದಭಾವಿ ಸಂಬರಗಿ ಶಿವನೂರ್ ಖಿಳೇಗಾಂವ್ ಅಜೂರ್ ಪಾಂಡೆಗಾವ್ ಮಲಬಾದ ಹಲವು ಗ್ರಾಮಗಳಲ್ಲಿ ಬೆಳೆಗಳು ಒಣಗಿ ಹೋಗಿರುವುದರಿಂದ ಈ ವರ್ಷಗಳಲ್ಲಿ ಉತ್ಪಾದನೆಯಲ್ಲಿ ಭಾರಿ ಇಳಿಕೆಯಾಗಲಿದೆ. ಈ ಭಾಗದಲ್ಲಿ ನೀರಿನ ಯೋಜನೆ ಬಂದರೆ ಮಾತ್ರ ರೈತರು ಬಡವರಾಗುವ ಹಂತದಲ್ಲಿದ್ದಾರೆ, ರೈತ ಭವಿಷ್ಯದಲ್ಲಿ ಹಳ್ಳಿಯಲ್ಲೇ ಉಳಿಯಬಹುದು ಇಲ್ಲದಿದ್ದರೆ ಗ್ರಾಮ ಬಿಟ್ಟು ವಲಸೆ ಹೋಗುವ ಕಾಲವನ್ನು ತಳ್ಳಿಹಾಕುವಂತಿಲ್ಲ.ಫೋಟೋನೀರಿನ ಕೊರತೆಯಿಂದ ಗಡಿಭಾಗದಲ್ಲಿ ಹಲವಾರು ಗ್ರಾಮದಲ್ಲಿ ಜ್ವಾಳದ ಬೆಳೆ ನೀರಿನ ಬತ್ತಿ ಹೋಗಿದ್ದುಸಂಬರಗಿ ಗ್ರಾಮದಲ್ಲಿ ರೈತರುಬತ್ತಿ ಹೋಗಿರೋ ಬೆಳೆ ಜಾಣರಿಗೆ ಮೇವಂತ ಉಪಯೋಗ ಮಾಡುತ್ತಿದ್ದಾರೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 