ಸಂವಿಧಾನ ವಿರೋಧಿ ನಡೆ ಖಂಡಿಸಿ ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ

ಸಂವಿಧಾನ ವಿರೋಧಿ ನಡೆ ಖಂಡಿಸಿ ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ District Youth Congress protests against unconstitutional move

ಹಾವೇರಿ 24 :ರಾಜ್ಯಪಾಲರ ಸಂವಿಧಾನ ವಿರೋಧಿ ನಡೆ ಖಂಡಿಸಿ ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ   ಪ್ರತಿಭಟನೆಯನ್ನು ಹಾವೇರಿ ಕೃಷಿ ಮಾರುಕಟ್ಟೆ ಎದುರಗಡೆ ಮಾಡಲಾಯಿತು. ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ನವೀದ ಮಾತನಾಡಿ  ರಾಜ್ಯಪಾಲರು ವಿಧಾನಸಭೆಯಲ್ಲಿ ರಾಜ್ಯ ಸರಕಾರ ಹೇಳಿರುವ ಮನರೇಗಾ ವಾಸ್ತುವ ಅಂಶಗಳನ್ನು ಓದದೇ ಸಂವಿಧಾನ ವಿರೋಧಿ ನೀತಿಯನ್ನು ಅನುಸರಿಸಲಾಗಿದೆ. ರಾಜ್ಯಪಾಲರು ರಾಜ್ಯದ ಜನತೆಯ ಆಶೋತ್ತರಗಳನ್ನು ಈಡೇರಿಸುವ ಪ್ರಯತ್ನ ಮಾಡಬೇಕು.

ಸರ್ಕಾರ ಮನರೇಗಾ ಯೋಜನೆ ಉಳಿಯಬೇಕು ಎಂಬ ಉದ್ದೇಶದಿಂದ ಅಧಿವೇಶನ ನಡೆಸುತ್ತಿದ್ದು, ಇದಕ್ಕೆ ರಾಜ್ಯಪಾಲರು ಸ್ಪಂದಿಸುವ ಕೆಲಸ ಮಾಡಬೇಕಿತ್ತು ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಮುಖಂಡರಾದ ಶಂಕರ ಮೆಹರವಾಡೆ,ಅಬ್ದುಲ್ ಖಾದರ್ ಸಾದಿಕ್ ಮೈಲುಮುರಿ, ಹಸನ ರಜಾ,ಜಮೀರ್ ಜಿಗರಿ,ವಿವೇಕ್ ಎಚ್,ಯಾಸೀನ್ ಮೊಮೀನಗರ್, ರೋಷನ್ ಮಲ್ಲಡ್,ಸಿದ್ದು ಪುರದ,ಗದಿಗೆಪ್ಪ ನೆಲೋಗಲ್,ಸಾದಿಕ್ ಯಾದವಾಡ,ಸುಭಾಷ್ ಚವ್ಹಾಣ,ಸುಲೇಮಾನ್ ಯಲವಿಗಿ ಸೇರಿದಂತೆ ಅನೇಕರಿದ್ದರು.