ನಾಗರಾಳ ಗ್ರಾಮದ ಮಲ್ಲಮ್ಮ ದೇವಸ್ಥಾನಕ್ಕೆ ಎರಡು ಲಕ್ಷ ದೇಣಿಗೆ ನೀಡಿದ ಧರ್ಮಸ್ಥಳ ಸಂಘ

ನಾಗರಾಳ ಗ್ರಾಮದ   ಮಲ್ಲಮ್ಮ ದೇವಸ್ಥಾನಕ್ಕೆ ಎರಡು ಲಕ್ಷ ದೇಣಿಗೆ ನೀಡಿದ ಧರ್ಮಸ್ಥಳ ಸಂಘ Dharmasthala Sangha donates Rs 2 lakh to Mallamma Temple in Nagarala village


   ಮಹಾಲಿಂಗಪುರ  18:  ಸಮೀಪದ ನಾಗರಾಳ ಗ್ರಾಮದ ಶ್ರೀ ಹೇಮರೆಡ್ಡಿ ಮಲ್ಲಮ್ಮ ದೇವಸ್ಥಾನಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳು ಡಾ. ಡಿ ವಿರೇಂದ್ರ ಹೆಗ್ಗಡೆ ಪೂಜ್ಯರು ?2,00,000/- ದೇಣಿಗೆಯನ್ನು ದೇವಸ್ಥಾನದ ನಿರ್ಮಾಣಕ್ಕೆ ನೀಡಿದ್ದಾರೆ.ಆ ನಗದು ಮೊತ್ತದ ಡಿಡಿಯನ್ನು,ಜಿಲ್ಲಾ ನಿರ್ದೇಶಕ ಚೆನ್ನಕೇಶವ,ತಾಲೂಕಾ ಯೋಜನಾಧಿಕಾರಿಗಳಾದ ರಾಜು ಎಸ್ ಆಚಾರ್ಯ, ಶಿರೋಳ ವಲಯದ ಮೇಲ್ವೀಚಾರಕಿ ಚಂದ್ರಕಲಾ,ಸೇವಾ ಪ್ರತಿನಿಧಿ ಗೋವಿಂದಪ್ಪ ಗಿರವ್ವಗೋಳ,ಜನಜಾಗೃತಿ ವೇದಿಕೆಯ ಸದಸ್ಯ ಶ್ರೀಶೈಲಗೌಡ ಪಾಟೀಲ ಮತ್ತು ಊರಿನ ಗಣ್ಯರು,ಸಂಘದ ಸದಸ್ಯರ ಉಪಸ್ಥಿತಿಯಲ್ಲಿ ವಿತರಿಸಿದರು. ಈ ಸಂದರ್ಭದಲ್ಲಿ   ಕ್ಷೇತ್ರ ಧರ್ಮಸ್ಥಳ ಸಂಘದ ಅಧಿಕಾರಿಗಳಿಗೆ ಊರಿನ ಗಣ್ಯರು ಅಭಿನಂದಿಸಿದರು.