ನಾಳೆ ಚಿದಂಬರ ದೇವಸ್ಥಾನದಲ್ಲಿ ಸದ್ಭಕ್ತರ ಸಭೆ

ನಾಳೆ ಚಿದಂಬರ ದೇವಸ್ಥಾನದಲ್ಲಿ ಸದ್ಭಕ್ತರ ಸಭೆ Devotees' meeting at Chidambaram temple tomorrow


ವಿಜಯಪುರ 19: ಚಿದಂಬರ ಸೇವಾ ಸಮಿತಿವತಿಯಂದ ಸರ್ವ ಸಾಮಾನ್ಯ ಸಭೆ ಹಾಗೂ 50 ನೇ ವರ್ಷದ ಸುವರ್ಣ ಮಹೋತ್ಸವವ ನಿಮಿತ್ಯವಾಗಿ ವಿಜಯಪುರ ನಗರದ ಬೆಂಗಳೂರು ರಿಂಗ್ ರಸ್ತೆಯಲ್ಲಿರುವ ಚಿದಂಬರ ದೇವಸ್ಥಾನದಲ್ಲಿ ದಿ.21ಬೆಳಿಗ್ಗೆ 10.30 ಗಂಟೆಗೆ ಸಭೆ ಕರೆಯಲಾಗಿದೆ.  

ಈ ಸಭೆಯಲ್ಲಿ ಸದ್ಭಕ್ತರು ಭಾಗವಹಿಸಿ ಶ್ರಾವಣ ಮಾಸದ 2026 ಸುವರ್ಣ ಮಹೋತ್ಸವದ ಕಾರ್ಯಕ್ರಮದ ಪೂರ್ವಭಾವಿಯಾಗಿ ಚರ್ಚಿಸಲಾಗುವುದು. ಈ ಸಭೆಯಲ್ಲಿ ಸದ್ಭಕ್ತರು ಆಗಮಿಸಿ ಸಲಹೆ ಸೂಚನೆ ನೀಡಬಹುದಾಗಿದೆ ಎಂದು ಚಿದಂಬರ ಸೇವಾ ಸಮಿತಿ ಆಡಳಿತ ಮಂಡಳಿಯ ಅಧ್ಯಕ್ಷ ಲಕ್ಷ್ಮೀಕಾಂತ ಕುಲಕರ್ಣಿ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.