ದೇವಗಿರಿ ಸಮೂಹ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ
Devgiri Group Level Talent Fountain Programme
ಹಾವೇರಿ 22: ತಾಲೂಕಿನ ದೇವಗಿರಿ ಕ್ಲಸ್ಟರ್ ಮಟ್ಟದ ಪ್ರಾಥಮಿಕ ಶಾಲೆಗಳ ಪ್ರತಿಭಾ ಕಾರಂಜಿ ಕಾರ್ಯಕ್ರಮ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕೋಳೂರ ಇಲ್ಲಿ ಅದ್ದೂರಿಯಾಗಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಜ್ಯೋತಿ ಬೆಳಗಿಸಿ ಹಾಗೂ ಡೋಲು ಬಾರಿಸುವ ಮೂಲಕ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಮಹದೇವಪ್ಪ ಡಿ ಎಂ ಅವರು ಉದ್ಘಾಟಿಸಿದರು.ಮಕ್ಕಳಲ್ಲಿ ಸೂಕ್ತವಾಗಿರುವ ಪ್ರತಿಭೆಯನ್ನು ಹೊರ ತೆಗೆಯಲು ಪ್ರತಿಭಾ ಕಾರಂಜಿ ಅತ್ಯಂತ ಸೂಕ್ತವಾದಂತ ವೇದಿಕೆಯಾಗಿದೆ. ಮಕ್ಕಳು ಚಟುವಟಿಕೆ ಜೊತೆಗೆ ಪಾಲ್ಗೊಂಡು ತಮ್ಮ ಪ್ರತಿಭೆಗಳನ್ನು ಪ್ರದರ್ಶಿಸಬೇಕು ಎಂದು ಹೇಳಿದರು. ಬೇರೆ ಬೇರೆ ಕ್ಲಸ್ಟರ್ ಇಂದ ಆಗಮಿಸಿದ ನಿರ್ಣಾಯಕ ಶಿಕ್ಷಕರನ್ನು ಒಂದೆಡೆ ಸಭೆ ಸೇರಿಸಿ ಸ್ಪರ್ಧೆಗಳನ್ನು ನಡೆಸಲು ಅನುವು ಮಾಡಿಕೊಡಲಾಯಿತು.
ತಮಗೆ ನಿರ್ವಹಿಸಿದ ಸ್ಪರ್ಧಿಗಳನ್ನು ಕಂಠಪಾಠ ಕನ್ನಡ,ಇಂಗ್ಲಿಷ್,ಹಿಂದಿ, ಧಾರ್ಮಿಕ ಪಠಣ, ಸಂಸ್ಕೃತ ಮತ್ತು ಅರೇಬಿಕ್ ,ದೇಶಭಕ್ತಿ ಗೀತೆ, ಭಕ್ತಿಗೀತೆ, ಛದ್ಮವೇಷ ಮುಂತಾದ ಸ್ಪರ್ಧೆಗಳಲ್ಲಿ ಮಕ್ಕಳು ಅತ್ಯುತ್ಸಾಹದಿಂದ ಭಾಗವಹಿಸಿದರು. ಸ್ಪರ್ಧೆಗೆ ಬಂದಿದ್ದ ಎಲ್ಲಾ ಮಕ್ಕಳಿಗೂ ಶಿಕ್ಷಕರಿಗೂ ಹಾಗೂ ಮಕ್ಕಳೊಂದಿಗೆ ಬಂದಿರುವ ಎಲ್ಲಾ ತಾಲೂಕು ಪೋಷಕರಿಗೂ ಗ್ರಾಮಸ್ಥರು ಹಾಗೂ ಎಸ್ ಡಿ ಎಂ ಸಿಯವರು ಸಿಹಿ ಭೋಜನ ವ್ಯವಸ್ಥೆ ಮಾಡಿದ್ದರು. ಅಲ್ಲದೆ ವಿಜೇತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ಮತ್ತು ಪದಕಗಳನ್ನು ವಿತರಿಸಲಾಯಿತು. ಮಕ್ಕಳೆಲ್ಲರೂ ಸಂತೋಷದಿಂದ ಪ್ರಶಸ್ತಿ ಪತ್ರ ಮತ್ತು ಪದಕಗಳೊಂದಿಗೆ ತಮ್ಮೊಂದಿಗೆ ಬಂದಿದ್ದ ಶಿಕ್ಷಕ ಶಿಕ್ಷಕಿಯರೊಂದಿಗೆ ತಮ್ಮ ತಮ್ಮ ಶಾಲೆಗಳಿಗೆ ಸುರಕ್ಷಿತವಾಗಿ ಮರಳಿದರು , ಕಾರ್ಯಕ್ರಮದ ಯಶಸ್ವಿಗಾಗಿ ಇಲಾಖೆಯ ಅಧಿಕಾರಿಗಳು ಶಿಕ್ಷಕರು, ಗ್ರಾಮಸ್ಥರು ಮತ್ತು ಎಸ್ಡಿಎಂಸಿ ಅವರನ್ನು ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಮಲ್ಲೇಶ್ ಕರಿಗಾರಿ್ಶಕ್ಷಣ ಸಂಯೋಜಕ ಎಸ್ ಆರ್ ಹಿರೇಮಠ, ಸಮೂಹ ಸಂಪನ್ಮೂಲ ವ್ಯಕ್ತಿ ಶ್ರೀಕಾಂತ್ ದೊಡ್ಡಕುರುಬರ,ಎಸ್ ಡಿ ಎಂ ಸಿ ಅಧ್ಯಕ್ಷ ಹಸನ್ ಸಾಬ್ ಮುಂದಿನಮನಿ,ಉರ್ದು ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷ ಖಾಸಿಂಸಾಬ್ ಮುಂದಿನಮನಿ, ಉಪಾಧ್ಯಕ್ಷರಾದ ಶ್ರೀಮತಿ ಯಶೋಧ ಚಂದ್ರ್ಪ ತಳಗೇರಿ, ಪ್ರಧಾನ ಗುರುಗಳಾದ ಎಂ ಕೆ ಹೊನ್ನಜ್ಜೇರ,ಎಸ್ ಡಿ ಎಂ ಸಿ ಮಾಜಿ ಅಧ್ಯಕ್ಷ ನಿಂಗಪ್ಪ ಹುಲಮನಿ ಶಿವಣ್ಣ ಹುರಳಿ , ಎಲ್ಲಪ್ಪ ಏರಿಮನಿ,ರಾಜಪ್ಪ ದನ್ನಣ್ಣನವರ ಊರಿನ ಗಣ್ಯರಾದ ಶಂಕರ್ ಗೌಡ ಪಾಟೀಲ್ ಎಸ್ಡಿಎಂಸಿ ಸದಸ್ಯರಾದ ಸಣ್ಣಪ್ಪ ಮ್ಯಾಗಳಕೇರಿ, ವಿನಾಯಕ್ ಮಾಗಾವಿ, ಪುಟ್ಟಪ್ಪ ಏರಿಮನಿ, ಶಿವಲಿಂಗಪ್ಪ ಕಾಮಣಿ, ರೇಖಾ ಮಂಡಗಣಿ ಹಾಗೂ ಬಿಐಇಆರ್ಟಿ ವಾಯ್ ಹೊಸಮನಿ,ಮಾಲತೇಶ ಕಮ್ಮಾರ ಮುಂತಾದವರು ಭಾಗಹಿಸಿದ್ದರು. ಶಿಕ್ಷಕ ಬಿ ಬಿ ನಾಣಾಪುರ ನಿರ್ವಹಿಸಿದರು. ನಾಗರಾಜ್ ಹುಡೇದ ಸ್ವಾಗತಿಸಿದರು. ಎಸ್ ಪಿ ಬೆಳ್ಳಟ್ಟಿಮಠ ವಂದಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 