ಶಾಸಕ ರಾಜು ಕಾಗೆ ನೇತೃತ್ವದಲ್ಲಿ ಕಾಗವಾಡ ಕ್ಷೇತ್ರದ ಅಭಿವೃದ್ಧಿಗೆ ಚಾಲನೆ
Development of Kagawada constituency launched under the leadership of MLA Raju Kage
ಅಥಣಿ : ಕಾಗವಾಡ ಶಾಸಕ ರಾಜು ಕಾಗೆಯವರ ನಿರ್ದೇಶನ ಮೇರೆಗೆ ತೆವರಟ್ಟಿಯಿಂದ ಬಿರಾದಾರ ವಸತಿ ವರೆಗಿನ ಮತ್ತು ತೆವರಟ್ಟಿ ರಸ್ತೆ ಕಾಮಗಾರಿಗೆ ಅಗ್ರಾಣಿ ನದಿ ಇಂಗಳಗಾಂವ ಮತ್ತು ತೆವರಟ್ಟಿ ಗ್ರಾಮದ ಮುಖಂಡರು ಭೂಮಿ ಪೂಜೆ ನೆರವೇರಿಸಿದರು.ಶಾಸಕ ರಾಜು ಕಾಗೆ ನೇತೃತ್ವದಲ್ಲಿ ಕಾಗವಾಡ ಮತಕ್ಷೇತ್ರದಲ್ಲಿ ರಸ್ತೆ, ಕುಡಿಯುವ ನೀರು, ವಿದ್ಯುತ್, ಶಿಕ್ಷಣ, ಆರೋಗ್ಯ ಸೇರಿದಂತೆ ಅಗತ್ಯ ಮೂಲ ಭೂತ ಸೌಲಭ್ಯಗಳ ಯೋಜನೆಗಳನ್ನು ಅನುಷ್ಠಾನಗೊಳಿಸುವ ಮೂಲಕ ಕಾಗವಾಡ ಕ್ಷೇತ್ರವನ್ನು ಸಮಗ್ರ ಅಭಿವೃದ್ಧಿಗೊಳಿಸುತ್ತಿದ್ದಾರೆ ಎಂದು ಮುಖಂಡರು ಅಭಿಪ್ರಾಯ ವ್ಯಕ್ತ ಪಡಿಸಿದರು. ಶಾಸಕ ರಾಜು ಕಾಗೆಯವರ ಆಪ್ತ ಸಹಾಯಕ ಕುಮಾರ ಪಾಟೀಲ, ಜಿಲ್ಲಾ ಪಂಚಾಯತ ಅಧಿಕಾರಿ ವೀರಣ್ಣಾ ವಾಲಿ, ಗುತ್ತಿಗೆದಾರರಾದ ಬಸವರಾಜ ನಾಯಿಕ, ಶಿವಪುತ್ರ ನಾಯಿಕ, ಸಿದ್ಧಾರೂಢ ನ್ಯಾಮಗೌಡರ, ಸೋವಿತ್ ಪಾಟೀಲ, ವಿಠ್ಠಲ್ ಮಹಾರಾಜರು, ದೀಲೀಪ ಪೂಜಾರಿ, ಅರ್ಜುನ ಪೂಜಾರಿ, ಸುರೇಶ ಪಾಟೀಲ, ಸತೀಶ ಪಾಟೀಲ, ಎಮ್.ಎ.ನೀಲಜಗಿ, ಮುರಿಗೆಪ್ಪಾ ನೀಲಜಗಿ, ಅಪ್ಪಾಸಾಬ ಘಟನಟ್ಟಿ, ಸುಕುಮಾರ ಅನಗಾಲಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ
ಇಂಗ್ಲೆಂಡ್ನ ಮಹರ್ಷಿ ಶ್ರೀ ವಾಲ್ಮೀಕಿ ಆಶ್ರಮಕ್ಕೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ 