ಸಚಿವ ಜೋಶಿ ಅನುಧಾನದಿಂದ ಗ್ರಾಮದೇವಿ ದೇವಸ್ಥಾನ ಅಭಿವೃದ್ಧಿ
Development of Grama Devi Temple under the care of Minister Joshi
ಶಿಗ್ಗಾವಿ 22 : ಸದಾ ಗ್ರಾಮೀಣ ಅಭಿವೃದ್ಧಿ, ಧಾರ್ಮಿಕ ಸಾಂಸ್ಕೃತಿಕ ಪರಂಪರೆಯ ಸಂರಕ್ಷಣೆ ಮತ್ತು ಜನಕಲ್ಯಾಣಕ್ಕೆ ಆದ್ಯತೆ ನೀಡುತ್ತಿರುವ ಸಚಿವರ ಎಂ.ಪಿ.ಎಲ್.ಎ.ಡಿ ನಿಧಿಯಿಂದ ದೊರೆತ ಈ ಅನುದಾನವು ಹುಲಗೂರ ಗ್ರಾಮದ ಸಮಗ್ರ ಅಭಿವೃದ್ಧಿಗೆ ಮತ್ತೊಂದು ಮಹತ್ವದ ಹೆಜ್ಜೆಯಾಗಿದೆ ಎಂದು ಪುತ್ರಣ್ಣ ಹೊನ್ನಣ್ಣನವರ ಹೇಳಿದರು. ತಾಲೂಕಿನ ಹುಲಗೂರ ದೇವಿಯ ದೇವಸ್ಥಾನಕ್ಕೆ ಸಂಬಂಧಿಸಿದಂತೆ ಸಾಂಸ್ಕೃತಿಕ ಭವನ ನಿರ್ಮಾಣ ಕಾರ್ಯಕ್ಕೆ ಮಹತ್ವದ ಮುನ್ನಡೆ ದೊರೆತಿದ್ದು, ಈ ಕಾರ್ಯಕ್ಕಾಗಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಎಂ.ಪಿ.ಎಲ್.ಎ.ಡಿ ನಿಧಿಯಿಂದ ರೂ15 ಲಕ್ಷ ಅನುಧಾನ ಮಂಜೂರಾಗಿದೆ.
ಈ ಭವನವು ಯುವಕರು, ಮಹಿಳಾ ಸಂಘಗಳು ಹಾಗೂ ಗ್ರಾಮಸ್ಥರ ಸಾಮಾಜಿಕ ಚಟುವಟಿಕೆಗಳಿಗೆ ಸಹ ವೇದಿಕೆಯಾಗಲಿದ್ದು, ಗ್ರಾಮದಲ್ಲಿ ಸಂಸ್ಕೃತಿ ಮತ್ತು ಏಕತೆಯನ್ನು ಮತ್ತಷ್ಟು ಬಲಪಡಿಸುವಲ್ಲಿ ಮಹತ್ವದ ಪಾತ್ರ ವಹಿಸಲಿದೆ. ಚುನಾವಣಾ ಪೂರ್ವದಲ್ಲಿ ಕೆಂದ್ರ ಸಚಿವರು ಮಾತು ಕೊಟ್ಟಂತೆ ನಡೆದಿದ್ದಾರೆ ಎಂದರು. ಈ ಸಂದರ್ಭದಲ್ಲಿ ಪುತ್ರಣ್ಣ ಹೊನ್ನಣ್ಣವರ,ಬಸಣ್ಣ ಪಟ್ಟಣ ಶೆಟ್ಟರ, ಮನೋಹರ ಕುಲಕರ್ಣಿ,ಶೇಖಣ್ಣ ಗಣಾಚಾರಿ, ಚಂದ್ರು ಆಚೇಬಣದ,ರುದ್ರಯ್ಯ ತವರಿ ಮಠ, ಜಗದೀಶ ತವರಿಮಠ ಗ್ರಾಮದ ಹಿರಿಯರು, ದೇವಾಲಯ ಸಮಿತಿ ಸದಸ್ಯರು ಹಾಗೂ ಭಕ್ತವೃಂದ ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 