ಚಿಕ್ಕಮ್ಯಾಗೇರಿಯಲ್ಲಿ ಲೋಕ ಕಲ್ಯಾಣಾರ್ಥವಾಗಿ ದೀಪೋತ್ಸವ

ಚಿಕ್ಕಮ್ಯಾಗೇರಿಯಲ್ಲಿ ಲೋಕ ಕಲ್ಯಾಣಾರ್ಥವಾಗಿ ದೀಪೋತ್ಸವ  Deepotsav for public welfare in Chikkamyageri

  ಯಲಬುರ್ಗಾ 19: ತಾಲೂಕಿನ ಚಿಕ್ಕಮ್ಯಾಗೇರಿ ಗ್ರಾಮದಲ್ಲಿ ಭೂ ಕೈಲಾಸ ಮೇಲುಗದ್ದುಗೆ ಸಂಸ್ಥಾನ ಹಿರೇಮಠ ಇಟಗಿ ಶಾಖಾಮಠದಲ್ಲಿ ಲೋಕಕಲ್ಯಾಣಕ್ಕಾಗಿ ದೀಪೋತ್ಸವ ಕಾರ್ಯಕ್ರಮ ಜರಗಿತು. ಬೆಳಿಗ್ಗೆ ನಡೆದ ಕಾರ್ಯಕ್ರಮದಲ್ಲಿ ಕತ್ರ್ಯಗದ್ದುಗೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯಿತು. ಗ್ರಾಮದ ಶ್ರೀಮಠದಲ್ಲಿ ನಡೆದ ದೀಪೋತ್ಸವಕ್ಕೆ ಕುದ್ರಿಮೋತಿಯ ಸಂಸ್ಥಾನ ಮೈಸೂರುಮಠದ ಜಗದ್ಗುರು ವಿಜಯ ಮಹಾಂತ ಸ್ವಾಮೀಜಿಗಳು ದೀಪವನ್ನು ಹಚ್ಚುವ ಮೂಲಕ ಚಾಲನೆ ನೀಡಿ ಆಶೀರ್ವಚನ ನೀಡಿದರು.

   ಸಮಾರಂಭದಲ್ಲಿ ಕುಷ್ಟಗಿಯ ಮದ್ದಾನೇಶ್ಬರಮಠದ ಕರಿಬಸವ ಸ್ವಾಮೀಜಿಗಳು,ಮಂಗಳೂರಿನ ಅರಳಲೇ ಹಿರೇಮಠದ ಸಿದ್ದಲಿಂಗ ಸ್ವಾಮೀಜಿಗಳು ಸಾನಿಧ್ಯ ವಹಿಸಿ ಮಾತನಾಡಿದರು. ಭೂ ಕೈಲಾಸ ಮೇಲುಗದ್ದುಗೆ ಸಂಸ್ಥಾನ ಹಿರೇಮಠ ಇಟಗಿಯ ಡಾ.ಗುರುಶಾಂತವೀರ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿದ್ದರು.  ಇದೇ ಸಂದರ್ಭದಲ್ಲಿ ಭಕ್ತರು ಹಣತೆಯಲ್ಲಿ ದೀಪವನ್ನು ಹಚ್ಚುವ ಮೂಲಕ ದೀಪೋತ್ಸವದಲ್ಲಿ ಭಾಗವಹಿಸಿ ಪುನೀತರಾದರು. ಅಪಾರ ಭಕ್ತ ಸಮೂಹ ಭಾಗವಹಿಸಿದ್ದರು.