ದಾನಮ್ಮದೇವಿ ದೇವಸ್ಥಾನದ ಜಾತ್ರಾ ಮಹೋತ್ಸವ
Danammadevi Temple Fair Festival
ಧಾರವಾಡ 16: ನಗರದಲ್ಲಿರುವ ಶಾಖಾ ಮೂರು ಸಾವಿರಮಠ, ದಾನಮ್ಮದೇವಿ ದೇವಸ್ಥಾನದ ಜಾತ್ರಾ ಮಹೋತ್ಸವವಿದ್ದು ಕಾರ್ಯಕ್ರಮದ ವಿವರ ಕೆಳಗಿನಂತಿದೆ. ಗುಡ್ಡಾಪೂರ ದಾನಮ್ಮದೇವಿ ಜಾತ್ರಾ ಮಹೋತ್ಸವದ ಶುಭ ಸಂದರ್ಭದಲ್ಲಿ ದಿನಾಂಕ 18-11-2025 ಮಂಗಳವಾರ ದಂದು ಎಸ್.ಎಸ್.ಎಲ್.ಸಿಯಲ್ಲಿ ಉತ್ತಮ ಅಂಕಗಳಿಸಿದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸನ್ಮಾನ, ಹಾಸ್ಯ ಕಲಾವಿದರಿಂದ ಹಾಸ್ಯ ಹಾಗೂ ನೃತ್ಯ ಕಾರ್ಯಕ್ರಮಗಳು ಸಂಜೆ ಜರುಗಲಿವೆ.
ದಿ. 20 ಗುರುವಾರ ದಿವಸದಂದು ಜಗದ್ಗುರು ಗುರುಸಿದ್ಧ ರಾಜಯೋಗೀಂದ್ರ ಮಹಾಸ್ವಾಮಿಗಳು, ಮೂರುಸಾವಿರ ಮಠ, ಹುಬ್ಬಳ್ಳಿ ಇವರ ಅಪ್ಪಣೆಯ ಮೇರೆಗೆ ಪ್ರತಿವರುಷದಂತೆ ಶಾಲಿವಾಹನಶಕ 1947 ವಿಶ್ವಾವಸುನಾಮ ಸಂವತ್ಸರ ಕಾರ್ತಿಕಮಾಸ ಕೃಷ್ಣಪಕ್ಷ, ವಿಶಾಖಾ ನಕ್ಷತ್ರ, ಛಟ್ಟಿ ಅಮಾವಾಸ್ಯೆ ದಿವಸ ಶಿವಶರಣೆ ಗುಡ್ಡಾಪೂರ ದಾನಮ್ಮದೇವಿಯ ಜಾತ್ರಾ ಮಹೋತ್ಸವವನ್ನು ಶಾಖಾ ಮೂರು ಸಾವಿರಮಠ, ದಾನಮ್ಮದೇವಿ ದೇವಸ್ಥಾನದ ಆವರಣದಲ್ಲಿ ಜರುಗುವುದು, ಅಂದು ಮುಂಜಾನೆ 6 ಗಂಟೆಗೆ ಶಿವಶರಣೆ ದಾನಮ್ಮದೇವಿ ಮತ್ತು - ಸೋಮವಾರ ಹಾಗೂ ಗುರುಸಿದ್ದೇಶ್ವರ ಗದ್ದುಗೆಗೆ ರುದ್ರಾಭಿಷೇಕ ಮಹಾಪೂಜೆ ಸಲ್ಲಿಸಲಾಗುವುದು.
ಅದೇ ದಿವಸ ಬೆಳಿಗ್ಗೆ 10.00 ಘಂಟೆಗೆ ಪಾಲಕಿ ಉತ್ಸವವು ಮಹಿಳೆಯರಿಂದ ಕುಂಭಮೇಳ, ಆರತಿ ಹಾಗೂ ಸಕಲ ವಾದ್ಯಗಳೊಂದಿಗೆ ನಡೆಯುವುದು, ಮಧ್ಯಾಹ್ನ 12.00 ಗಂಟೆಗೆ ದೇವಿಯ ಮಹಾಪೂಜೆ, ನಂತರ ಮಹಾಪ್ರಸಾದ ನಡೆಯುವುದು, ಯಾವತ್ತೂ ಭಕ್ತಾದಿಗಳು ದೇವಿಯ ಜಾತ್ರೆಗೆ ತನು, ಮನ, ಧನ, ಧಾನ್ಯದಿಂದ ತಪ್ಪದೇ ಸೇವೆ ಸಲ್ಲಿಸಿ ಮಹಾಪ್ರಸಾದ ಸ್ವೀಕರಿಸಿ ದೇವಿಯ ಕೃಪೆಗೆ ಹಾಗೂ ಗುರುಸಿದ್ಧೇಶ್ವರನ ಕೃಪೆಗೆ ಪಾತ್ರರಾಗಬೇಕಾಗಿ ದೇವಸ್ಥಾನ ಸೇವಾ ಸಮಿತಿ ಹಾಗೂ ಶ್ರೀ ಮೃತ್ಯುಂಜಯ ನಗರ ನ ಧಾರವಾಡದ ನಾಗರೀಕರ ಪರವಾಗಿ ಕೋರಿಕೆ, ಡಾ. ಮಲ್ಲಿಕಾರ್ಜುನ ಮಹಾಸ್ವಾಮಿಗಳು, ಅಧ್ಯಕ್ಷರು, ಮುರುಘಾಮಠ, ಧಾರವಾಡ ಇವರ ಅಮೃತಹಸ್ತದಿಂದ ಸಂಜೆ 6-30 ಕ್ಕೆ “ಕಾರ್ತಿಕೋತ್ಸವದ ಉದ್ಘಾಟನೆ” ಮಾಡುವರು. ಜಾತ್ರಾ ಮಹೋತ್ಸವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿ, ದೇವಿಯ ಕೃಪೆಗೆ ಪಾತ್ರರಾಗಬೇಕೆಂದು ಆಡಳಿತ ಮಂಡಳಿ ಸದಸ್ಯರಾದ ಮಂಜುನಾಥ ಸಾಲಿಮಠ, ನಾರಾಯಣ ಜಗಾಪೂರ, ಅಕ್ಷಯ ದಂಡಿನ ಹಾಗೂ ಶ್ರೀಕಾಂತ ಪೂಜಾರ ಪ್ರಕಟಣೆಯಲ್ಲಿ ಕೋರಿದ್ದಾರೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 