ಚಿಮ್ಮಡದಲ್ಲಿಂದು ಸಂಸ್ಕ ೃತಿ ಸಂಗಮೋತ್ಸವ

ಚಿಮ್ಮಡದಲ್ಲಿಂದು ಸಂಸ್ಕ ೃತಿ ಸಂಗಮೋತ್ಸವ  Cultural Confluence Festival in Chimmada

ರಬಕವಿ-ಬನಹಟ್ಟಿ  01: ಸಿದ್ದು ಸವದಿ ಶಿಕ್ಷಣ ಮತ್ತು ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಶ್ರೀ ಪ್ರಭುಲಿಂಗೇಶ್ವರ ಇಂಟರ್ ನ್ಯಾಶನಲ್ ಶಾಲೆ ಚಿಮ್ಮಡ ಇದರ ವಾರ್ಷಿಕ ಸಮ್ಮೇಳನ ಸಂಸ್ಕೃತಿ ಸಂಗಮೋತ್ಸವ ಇಂದು ಚಿಮ್ಮಡದ ಶಾಲಾ ಆವರಣದಲ್ಲಿ ಜರುಗಲಿದೆ.  ಶೇಗುಣಸಿ ವಿರಕ್ತಮಠದ ಡಾ. ಮಹಾಂತ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಲಿದ್ದು, ಚಿಮ್ಮಡ ವಿರಕ್ತಮಠದ ಪ್ರಭು ಮಹಾಸ್ವಾಮಿಗಳು, ಜನಾರ್ಧನ ಮಹಾರಾಜರು ಸಾನಿಧ್ಯ ವಹಿಸಲಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನು ಶಾಸಕ ಸಿದ್ದು ಸವದಿ, ಮುಖ್ಯ ಅತಿಥಿಗಳಾಗಿ ವಿಜಯಪುರ ನಗರ ಶಾಸಕ ಬಸವರಾಜ ಪಾಟೀಲ ಯತ್ನಾಳ, ಚಿದಾನಂದ ಸವದಿ ಆಗಮಿಸಲಿದ್ದು, ಬಾಬಾಗೌಡ ಪಾಟೀಲ, ಬಾಲಚಂದ್ರ ನಂದೇಪ್ಪನವರ, ಉಮೇಶ ಮಲ್ಹೋತ್ರಾ, ಡಾಽಽ ಸತೀಶ ಮಾಳಿ, ಡಿಡಿಪಿಆಯ್ ಎ.ಸಿ. ಮನ್ನಿಕೇರಿ, ಶಿಕ್ಷಣಾಧಿಕಾರಿ ಎ.ಕೆ. ಬಸನ್ನವರ, ರಮೇಶ ಅವಟಿ, ದಾಕ್ಷಾಯಣಿ ಮಂಡಿ ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದು ಸಂಸ್ಥೆಯ ಮುಖ್ಯಸ್ಥ ವಿದ್ಯಾಧರ ಸವದಿ ತಿಳಿಸಿದ್ದಾರೆ.