ಕಳಪೆ ಬೀಜ, ಓಷಧಿ ಮತ್ತು ಅತಿವೃಷ್ಠಿಯಿಂದ ಬೆಳೆ ಹಾನಿ: ಪರಿಹಾರಕ್ಕಾಗಿ ರೈತರ ಮನವಿ
Crop damage due to poor seeds, pesticides and heavy rains: Farmers appeal for compensation
ಬೆಳಗಾವಿ 31: ಕರ್ನಾಟಕ ರಾಜ್ಯ ಹಾಗೂ ಮುಖ್ಯವಾಗಿ ಉತ್ತರ ಕರ್ನಾಟಕ ಭಾಗದಲ್ಲಿ ಈ ಬಾರಿ ಕಳಪೆ ಬೀಜಗಳು ಮತ್ತು ಕಳಪೆ ಕೀಟನಾಶಕ ಓಷದ ಹಾಗೂ ಅತಿವೃಷ್ಟಿ ಮಳೆಹಾನಿಯಿಂದ ಸೋಯಾಬಿನ, ಹೆಸರು,ಹತ್ತಿ,ಕಬ್ಬು ಬೆಳಗಾರರಿಗೆ ಬಹಳಷ್ಟು ನಷ್ಟ ಉಂಟಾಗಿದೆ. ಬೆಳೆವಿಮೆ ಸಮೀಕ್ಷೆಯಲ್ಲೂ ಬಹಳಷ್ಟು ರೈತರಿಗೆ ಅನ್ಯಾಯವಾಗಿದೆ. ಇನ್ನೂವರೆಗು ರೈತರ ಖಾತೆಗೆ ಜಮಾ ಆಗದೆ ಇರುವುದು ಖಂಡನೀಯ ಸರಿಯಾಗಿ ಪರೀಶಿಲಿಸಿ ರೈತರಿಗೆ ಕನಿಷ್ಠ 25000 ಪರಿಹಾರ ನಿಗದಿಪಡಿಸಲು ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ನೇಗಿಲಯೋಗಿ ರೈತ ಸೇವ ಸಂಘ ಮನವಿ ಸಲ್ಲಿಸಿದರು.ಈ ವರ್ಷ ಮಳೆ ಹೆಚ್ಚಾಗಿ ಕಬ್ಬಿನ ಬೆಲೆ ಕುಂಟಿತವಾಗಿದೆ, ಬಿಳಿ ಉಣ್ಣೆ ರೋಗ ತಗುಲಿದೆ. 2025/26 ನೇ ಸಾಲಿನಲ್ಲಿ ಕಬ್ಬಿಗೆ ಗುಜರಾತ್ ಮತ್ತು ಪಂಜಾಬ ಹಾಗೂ ಮಹಾರಾಷ್ಟ್ರ ಮಾದರಿಯಲ್ಲಿ 1 ಟನ್ ಗೆ 3500 ರಿಂದ 4000 ಬೆಲೆ ಘೋಷಣೆ ಮಾಡಬೇಕೆಂದು ಪ್ರಮುಖ ಬೆಳೆಗಳಿಗೆ ಖರೀದಿ ಕೇಂದ್ರ ಸ್ಥಾಪಿಸಲು ಒತ್ತಾಯಿಸಿದರು. ರಾಜ್ಯ ರೈತರ ಹಲವಾರು ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮ ಜರುಗಿಸಬೇಕು ಎಂದರು. ಸರ್ಕಾರ ಇತ್ತೀಚಿನ ದಿನಗಳಲ್ಲಿ ರೈತ ಮತ್ತು ಬಡವರ್ಗದವರನ್ನು ಕಡೆಗಣಿಸುತ್ತಿರುವುದು ಖಂಡನೀಯ, ಮುಂದಿನ ದಿನಗಳಲ್ಲಿ ರೈತರೆಲ್ಲರೂ ಉಗ್ರಹೋರಾಟ ನಿರ್ಣಯಗಳನ್ನು ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 