ಸಮಕಾಲೀನ ಕಾವ್ಯಗಳು ನಿವೇದನಾತ್ಮಕವಾಗಿವೆ : ಆರಿಫ್ ರಾಜ್
ಹಂಪಿ 12: ಸಮಕಾಲೀನದಲ್ಲಿ ಭಾಷೆಗಳು ಸಂಕುಚಿತಗೊಳ್ಳುತ್ತಿದ್ದು, ಇವು ಕಣ್ಣಿಗೆ ಕಾಣದ ಹಿಂಸೆಯಾಗಿ ಪರಿವರ್ತನೆಗೊಂಡಿವೆ. ಇದು ಕಥೆ, ಕಾವ್ಯ ಹಾಗೂ ಕವಿತೆಗಳು ನಿವೇದನಾತ್ಮಕ ಕಾವ್ಯಗಳಾಗಿ ರೂಪುಗೊಂಡಿವೆ ಎಂದು ಕವಿ ಮತ್ತು ಅನುವಾದಕರಾದ ಆರಿಫ್ ರಾಜಾ ಅವರು ಮಾತನಾಡಿದರು.
ಕನ್ನಡ ವಿಶ್ವವಿದ್ಯಾಲಯದ ಪಂಪ ಸಭಾಂಗಣದಲ್ಲಿ ದಿನಾಂಕ 12.02.2025ರಂದು ಕನ್ನಡ ಸಾಹಿತ್ಯ ಅಧ್ಯಯನ ವಿಭಾಗದಿಂದ ಹಮ್ಮಿಕೊಳ್ಳಲಾಗಿದ್ದ ಕವಿತೆಗಳ ಓದು ಹಾಗೂ ಸಂವಾದ ಸಮಕಾಲೀನ ಭಾರತೀಯ ಕಾವ್ಯ ಸಂವೇದನೆಯ ಸ್ವರೂಪ ಎನ್ನುವ ಕಾರ್ಯಕ್ರಮದಲ್ಲಿ ಆರಿಫ್ ರಾಜಾ ಅವರು ಮಾತನಾಡುತ್ತಾ, ನಾವು ದಲಿತ ಕಾವ್ಯಗಳು 90ರ ದಶಕದ ನಂತರ ಸಾಹಿತ್ಯದಲ್ಲಾದ ಏರುಪೇರುಗಳತ್ತ ಗಮನಹರಿಸಬೇಕು. ಕಾವ್ಯಗಳು ಕಲಾತ್ಮಕ ಮೌಲ್ಯಕ್ಕಿಂತ ಆತ್ಮಾವಲೋಕನಕ್ಕೆ ಹೆಚ್ಚು ಒತ್ತು ನೀಡಿದೆ. ಇನ್ನೂ ಅಮೂರ್ತ ಚಿಂತನೆಗೆ ನಾವು ಹೆಚ್ಚು ಹೊತ್ತು ನೀಡಬಾರದು ಎಂದು ನುಡಿಯುತ್ತ ಹೆದರುವಂತಹ ಲೇಖಕ ಸಮಾಜಕ್ಕೆ ಯಾವುದೇ ಕೊಡುಗೆಗಳನ್ನು ನೀಡುವುದಿಲ್ಲ. ಸಮಕಾಲೀನ ಕಾವ್ಯಗಳು ವಾಸ್ತವವಾಗಿರಬೇಕು ಎಂದು ಕವಿ ಮತ್ತು ಪತ್ರಕರ್ತರಾದ ಮನೋಜ್ ಬೋಗಾಟಿರವರು ತಮ್ಮ ಕವಿತೆಗಳಾದ 'ಇದು ಶಾಲೆಯಲ್ಲ ಅಡುಗೆ ಮನೆ' ಮತ್ತು 'ಅಮೆರಿಕ ಹೆದುರುತ್ತದೆ' ಎಂಬ ಕಾವ್ಯಗಳ ಮೂಲಕ ತಮ್ಮ ಗೋರ್ಖ ಸಮುದಾಯದ ಬಗ್ಗೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಡಾರ್ಜಲಿಂಗ್ನ ಕವಿ ಮತ್ತು ಪತ್ರಕರ್ತರಾದ ಮನೋಜ ಬೋಗಾಟಿ ಅವರು ಮಾತನಾಡುತ್ತಾ, ಡಾರ್ಜಲಿಂಗ್ನ ಚಹಾ ಜಗತ್ತಿನಾದ್ಯಂತ ತುಂಬಾ ಫೇಮಸ್ ಉತ್ತಮ ಗುಣಮಟ್ಟದ ಚಹಾಕ್ಕೆ ಲಕ್ಷಾಂತರ ರೂಪಾಯಿ ಬೆಲೆ ಸಿಗುತ್ತದೆ, ಆದರೆ ಅದೇ ಚಹಾದ ತೋಟಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಮಾತ್ರ ಕಡಿಮೆ ಕೂಲಿ ಸಿಗುತ್ತದೆ. ಇಲ್ಲಿಂದ ಆರಂಭವಾದ ತಾರತಮ್ಯ ಸ್ಥಳೀಯರ ಬದುಕು, ಭಾಷೆ, ಸಂಸ್ಕೃತಿಯ ಮೇಲೆ ಪ್ರಭಾವ ಬೀರಿ ಸ್ಥಳೀಯರ ಅಸ್ಮಿತೆಗೆ ಧಕ್ಕೆ ಉಂಟಾಗಿದೆ. ಅನ್ಯ ಭಾಷೆ ಏರಿಕೆಯಿಂದ ಎಲ್ಲ ಕ್ಷೇತ್ರದಲ್ಲಿಯೂ ಬುಡಕಟ್ಟು ಸಮುದಾಯಗಳ ಅನನ್ಯತೆ ಕಣ್ಮರೆಯಾಗಿವೆ ಎಂದು ತಿಳಿಸಿದರು. ಪ್ರಮುಖವಾಗಿ ನಾವು ಸಮಕಾಲಿನ ಕಾವ್ಯ ಮತ್ತು ನವ್ಯಸಾಹಿತ್ಯದ ಬಗ್ಗೆ ಹೆಚ್ಚಿನ ಜ್ಞಾನ ಹೊಂದಿರಬೇಕು ಮತ್ತು ಸಮಕಾಲಿನ ಸುತ್ತಲೂ ಇರುವ ಭಾಷೆ, ವಿಷಯಗಳ ಬಗ್ಗೆ ಅರಿವು ಅಗತ್ಯತೆಯಿದೆ ಎಂದು ನುಡಿದರು.
ಕನ್ನಡ ವಿಶ್ವವಿದ್ಯಾಲಯದ ಭಾಷಾ ನಿಕಾಯದ ಡೀನರಾದ ಡಾ.ಎಫ್.ಟಿ. ಹಳ್ಳಿಕೇರಿ ಅವರು ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡು ಮಾತನಾಡುತ್ತಾ, ನೇಪಾಳಿ ಸಾಹಿತ್ಯದ ಘಟನೆಗಳನ್ನು ನಾವೆಲ್ಲರೂ ಅರಿಯಬೇಕು, ಕಾವ್ಯಗಳ ಅಧ್ಯಯನದ ಜೊತೆಗೆ ಅಲ್ಲಿನ ಸ್ಥಳೀಯ ಭಾಷೆಯ ಧೋರಣೆಯನ್ನು ನಾವು ಅಧ್ಯಯನ ಮಾಡಿದಾಗ ಸ್ಥಳೀಯ ಜೀವನ ಮತ್ತು ಬದುಕನ್ನು ನಾವು ತಿಳಿಯಬಹುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಅಧ್ಯಯನ ವಿಭಾಗದ ಮುಖ್ಯಸ್ಥರಾದ ಡಾ. ವೆಂಕಟಗಿರಿ ದಳವಾಯಿ ಗಣ್ಯರನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು, ವಿವಿಧ ನಿಕಾಯಗಳ ಡೀನರು, ಮುಖ್ಯಸ್ಥರು, ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.